<p><strong>ತಿರುವನಂತಪುರ:</strong> ಪುನರ್ವಸತಿ ಯೋಜನೆಗೆ ವಿದೇಶದಿಂದ ನಿಧಿ ಸಂಗ್ರಹಿಸುವಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ವಿರುದ್ಧ ಸಿಬಿಐ ತನಿಖೆಗೆ ಕೇರಳ ಜಾಗೃತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.</p>.ಶಬರಿಮಲೆ | ಕಳುವಾದ ಚಿನ್ನ ಕೋಟ್ಯಧಿಪತಿ ಮನೆಯಲ್ಲಿ ಪತ್ತೆ: ವಿಪಕ್ಷ ನಾಯಕ ಸತೀಶನ್.<p>ಸಿಬಿಐ ತನಿಖೆಗೆ ಶಿಫಾರಸು ಒಳಗೊಂಡಿರುವ ವರದಿಯನ್ನು ಪಿಣರಾಯಿ ವಿಜಯನ್ ಅವರಿಗೆ ವಿಎಸಿಬಿ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.</p><p>ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ ಎ) ಕಾಯ್ದೆ ಉಲ್ಲಂಘನೆಯಾಗಿದ್ದು, ಹೀಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ವಿಎಸಿಬಿ ಶಿಫಾರಸು ಮಾಡಿದೆ.</p><p>ಖಾಸಗಿ ಭೇಟಿಗೆಂದು ಕೇಂದ್ರ ಸರ್ಕಾರದ ಅನುಮತಿ ಪಡೆದು ವಿದೇಶಕ್ಕೆ ಪ್ರಯಾಣಿಸಿದ್ದ ಸತೀಶನ್, ಅಲ್ಲಿ ಹಣ ಸಂಗ್ರಹಿಸಿ ಕೇರಳ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.</p>.ಕೇಂದ್ರ ಸಚಿವ ಸುರೇಶ್ ಗೋಪಿ ಗೆದ್ದ ತ್ರಿಶೂರ್ನಲ್ಲೂ ಮತಗಳವು: ಕೇರಳ LOP ಸತೀಶನ್.<p>ಎಫ್ ಸಿ ಆರ್ ಎ ಕಾಯ್ದೆ-2010ರ ಸೆಕ್ಷನ್ 3(2)(a) ಅಡಿ (ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಅಥವಾ ವಿದೇಶದಲ್ಲಿ ವಾಸಿಸುವ ಯಾವುದೇ ಭಾರತೀಯ ನಾಗರಿಕರು ರಾಜಕೀಯ ಪಕ್ಷದ ಪರವಾಗಿ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ) ಸಿಬಿಐ ತನಿಖೆಗೆ ವರದಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.</p><p>ಈ ಬಗ್ಗೆ ವಯನಾಡ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯವಾಗಿಯೂ, ವೈಯಕ್ತಿಕವಾಗಿಯೂ ಎದುರಿಸಲಾಗುವುದು ಎಂದಿದ್ದಾರೆ.</p> .ಕೇರಳ ಬಜೆಟ್ 2024-25: ವಾಸ್ತವಕ್ಕೆ ದೂರವಾದದ್ದು– ವಿ.ಡಿ. ಸತೀಶನ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಪುನರ್ವಸತಿ ಯೋಜನೆಗೆ ವಿದೇಶದಿಂದ ನಿಧಿ ಸಂಗ್ರಹಿಸುವಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ವಿರುದ್ಧ ಸಿಬಿಐ ತನಿಖೆಗೆ ಕೇರಳ ಜಾಗೃತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.</p>.ಶಬರಿಮಲೆ | ಕಳುವಾದ ಚಿನ್ನ ಕೋಟ್ಯಧಿಪತಿ ಮನೆಯಲ್ಲಿ ಪತ್ತೆ: ವಿಪಕ್ಷ ನಾಯಕ ಸತೀಶನ್.<p>ಸಿಬಿಐ ತನಿಖೆಗೆ ಶಿಫಾರಸು ಒಳಗೊಂಡಿರುವ ವರದಿಯನ್ನು ಪಿಣರಾಯಿ ವಿಜಯನ್ ಅವರಿಗೆ ವಿಎಸಿಬಿ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.</p><p>ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ ಎ) ಕಾಯ್ದೆ ಉಲ್ಲಂಘನೆಯಾಗಿದ್ದು, ಹೀಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ವಿಎಸಿಬಿ ಶಿಫಾರಸು ಮಾಡಿದೆ.</p><p>ಖಾಸಗಿ ಭೇಟಿಗೆಂದು ಕೇಂದ್ರ ಸರ್ಕಾರದ ಅನುಮತಿ ಪಡೆದು ವಿದೇಶಕ್ಕೆ ಪ್ರಯಾಣಿಸಿದ್ದ ಸತೀಶನ್, ಅಲ್ಲಿ ಹಣ ಸಂಗ್ರಹಿಸಿ ಕೇರಳ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.</p>.ಕೇಂದ್ರ ಸಚಿವ ಸುರೇಶ್ ಗೋಪಿ ಗೆದ್ದ ತ್ರಿಶೂರ್ನಲ್ಲೂ ಮತಗಳವು: ಕೇರಳ LOP ಸತೀಶನ್.<p>ಎಫ್ ಸಿ ಆರ್ ಎ ಕಾಯ್ದೆ-2010ರ ಸೆಕ್ಷನ್ 3(2)(a) ಅಡಿ (ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಅಥವಾ ವಿದೇಶದಲ್ಲಿ ವಾಸಿಸುವ ಯಾವುದೇ ಭಾರತೀಯ ನಾಗರಿಕರು ರಾಜಕೀಯ ಪಕ್ಷದ ಪರವಾಗಿ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ) ಸಿಬಿಐ ತನಿಖೆಗೆ ವರದಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.</p><p>ಈ ಬಗ್ಗೆ ವಯನಾಡ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯವಾಗಿಯೂ, ವೈಯಕ್ತಿಕವಾಗಿಯೂ ಎದುರಿಸಲಾಗುವುದು ಎಂದಿದ್ದಾರೆ.</p> .ಕೇರಳ ಬಜೆಟ್ 2024-25: ವಾಸ್ತವಕ್ಕೆ ದೂರವಾದದ್ದು– ವಿ.ಡಿ. ಸತೀಶನ್ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>