<p class="title"><strong>ಅಮರಾವತಿ: </strong>ಬಾಹ್ಯ ಅನುದಾನಿತ ಯೋಜನೆಗಳಿಗಾಗಿ (ಇಎಪಿ) ವಿದೇಶಿ ಸಂಸ್ಥೆಗಳಿಂದ ಸಾಲವಾಗಿ ಪಡೆದಿರುವ ₹ 960 ಕೋಟಿ ಹಾಗೂ ಈ ಪೈಕಿ ಬಳಕೆಯಾಗದೇ ಉಳಿದಿರುವ ಮೊತ್ತದ ಪ್ರಮಾಣ ಕುರಿತಂತೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.</p>.<p class="title">ಒಂದೆಡೆ, ಆಗಿರುವ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದು, ಕಾಮಗಾರಿಯನ್ನು ಜಾರಿಗೊಳಿಸುತ್ತಿರುವ ಇಲಾಖೆಗಳಿಗೆ ಈ ಕುರಿತಂತೆ ಅಸ್ಪಷ್ಟತೆ ಇದೆ. ಇನ್ನೊಂದೆಡೆ, ಕಾಮಗಾರಿಗಳ ಅನುಷ್ಠಾನ ವಿಳಂಬ ಹಾಗೂ ಬಾಕಿಯನ್ನು ಪಾವತಿಸಲಾಗದ ಕಾರಣ ರಾಜ್ಯ ಸರ್ಕಾರವು ಈ ಯೋಜನೆಗಳಿಗಾಗಿ ಹೊಸದಾಗಿ ವಿದೇಶಿ ಸಂಸ್ಥೆಗಳಿಂದ ಸಾಲವನ್ನು ಪಡೆಯಲಾಗದ ಸ್ಥಿತಿಯಲ್ಲಿದೆ.</p>.<p class="title"><strong>ಓದಿ:</strong><a href="https://www.prajavani.net/india-news/maharashtra-ats-arrests-one-more-person-in-connection-with-terror-module-busted-by-delhi-police-868032.html" itemprop="url">ಪಾಕ್ ಉಗ್ರರಿಂದ ಸ್ಫೋಟದ ಷಡ್ಯಂತ್ರ: ಮಹಾರಾಷ್ಟ್ರ ಎಟಿಎಸ್ನಿಂದ ಮತ್ತೊಬ್ಬನ ಬಂಧನ</a></p>.<p>ಕೇಂದ್ರ ಹಣಕಾಸು ಸಚಿವಾಲಯದಡಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯು (ಡಿಇಎ), ಈ ಬೆಳವಣಿಗೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವರಣೆ ನೀಡುವಂತೆ ರಾಜ್ಯದ ಹಣಕಾಸು ಇಲಾಖೆಗೆ ಸೂಚಿಸಿದೆ.</p>.<p>ಸರ್ಕಾರದ ಖಾತೆಯಲ್ಲಿಯೇ ದೊಡ್ಡ ಮೊತ್ತದ ಮುಂಗಡ ಹಣ ಉಳಿದುಕೊಂಡಿದೆ. ವಿವಿಧ ಇಲಾಖೆಗಳು ಅನುದಾನ ಬಳಸಿರುವ ಕ್ರಮ ತೃಪ್ತಿಕರವಾಗಿಲ್ಲ. ಸೆಪ್ಟೆಂಬರ್ 7ರಂದು ಇದ್ದಂತೆ ಮುಂಗಡವಾಗಿ ಬಿಡುಗಡೆ ಮಾಡಿರುವ ಮೊತ್ತ ಸುಮಾರು ₹ 960 ಕೋಟಿ ಆಗಿದೆ ಎಂದು ಡಿಇಒ ರಾಜ್ಯದ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.</p>.<p>ಸಾಲದ ಮೊತ್ತವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿಲ್ಲ. ಒಂದೆಡೆ ಬಡ್ಡಿ ಮೊತ್ತ ತೀವ್ರಗತಿಯಲ್ಲಿ ಏರುತ್ತಿದೆ, ಇನ್ನೊಂದೆಡೆ ಕಾಮಗಾರಿಗಳ ಅನುಷ್ಠಾನ ಆಮೆಗತಿಯಲ್ಲಿದೆ ಎಂದು ಡಿಇಎ ಹೇಳಿದೆ. ಅಲ್ಲದೆ, ಡಿಇಎ ಅಧಿಕಾರಿಗಳು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ದೂರವಾಣಿ ಕರೆ ಮಾಡಿದ್ದು, ವಿವರಣೆ ನೀಡಲು ಸೂಚಿಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/punjab-congress-crisis-ambika-soni-declines-next-chief-minister-post-867987.html" itemprop="url">ಪಂಜಾಬ್: ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದ ಅಂಬಿಕಾ ಸೋನಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಅಮರಾವತಿ: </strong>ಬಾಹ್ಯ ಅನುದಾನಿತ ಯೋಜನೆಗಳಿಗಾಗಿ (ಇಎಪಿ) ವಿದೇಶಿ ಸಂಸ್ಥೆಗಳಿಂದ ಸಾಲವಾಗಿ ಪಡೆದಿರುವ ₹ 960 ಕೋಟಿ ಹಾಗೂ ಈ ಪೈಕಿ ಬಳಕೆಯಾಗದೇ ಉಳಿದಿರುವ ಮೊತ್ತದ ಪ್ರಮಾಣ ಕುರಿತಂತೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.</p>.<p class="title">ಒಂದೆಡೆ, ಆಗಿರುವ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದು, ಕಾಮಗಾರಿಯನ್ನು ಜಾರಿಗೊಳಿಸುತ್ತಿರುವ ಇಲಾಖೆಗಳಿಗೆ ಈ ಕುರಿತಂತೆ ಅಸ್ಪಷ್ಟತೆ ಇದೆ. ಇನ್ನೊಂದೆಡೆ, ಕಾಮಗಾರಿಗಳ ಅನುಷ್ಠಾನ ವಿಳಂಬ ಹಾಗೂ ಬಾಕಿಯನ್ನು ಪಾವತಿಸಲಾಗದ ಕಾರಣ ರಾಜ್ಯ ಸರ್ಕಾರವು ಈ ಯೋಜನೆಗಳಿಗಾಗಿ ಹೊಸದಾಗಿ ವಿದೇಶಿ ಸಂಸ್ಥೆಗಳಿಂದ ಸಾಲವನ್ನು ಪಡೆಯಲಾಗದ ಸ್ಥಿತಿಯಲ್ಲಿದೆ.</p>.<p class="title"><strong>ಓದಿ:</strong><a href="https://www.prajavani.net/india-news/maharashtra-ats-arrests-one-more-person-in-connection-with-terror-module-busted-by-delhi-police-868032.html" itemprop="url">ಪಾಕ್ ಉಗ್ರರಿಂದ ಸ್ಫೋಟದ ಷಡ್ಯಂತ್ರ: ಮಹಾರಾಷ್ಟ್ರ ಎಟಿಎಸ್ನಿಂದ ಮತ್ತೊಬ್ಬನ ಬಂಧನ</a></p>.<p>ಕೇಂದ್ರ ಹಣಕಾಸು ಸಚಿವಾಲಯದಡಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯು (ಡಿಇಎ), ಈ ಬೆಳವಣಿಗೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವರಣೆ ನೀಡುವಂತೆ ರಾಜ್ಯದ ಹಣಕಾಸು ಇಲಾಖೆಗೆ ಸೂಚಿಸಿದೆ.</p>.<p>ಸರ್ಕಾರದ ಖಾತೆಯಲ್ಲಿಯೇ ದೊಡ್ಡ ಮೊತ್ತದ ಮುಂಗಡ ಹಣ ಉಳಿದುಕೊಂಡಿದೆ. ವಿವಿಧ ಇಲಾಖೆಗಳು ಅನುದಾನ ಬಳಸಿರುವ ಕ್ರಮ ತೃಪ್ತಿಕರವಾಗಿಲ್ಲ. ಸೆಪ್ಟೆಂಬರ್ 7ರಂದು ಇದ್ದಂತೆ ಮುಂಗಡವಾಗಿ ಬಿಡುಗಡೆ ಮಾಡಿರುವ ಮೊತ್ತ ಸುಮಾರು ₹ 960 ಕೋಟಿ ಆಗಿದೆ ಎಂದು ಡಿಇಒ ರಾಜ್ಯದ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.</p>.<p>ಸಾಲದ ಮೊತ್ತವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿಲ್ಲ. ಒಂದೆಡೆ ಬಡ್ಡಿ ಮೊತ್ತ ತೀವ್ರಗತಿಯಲ್ಲಿ ಏರುತ್ತಿದೆ, ಇನ್ನೊಂದೆಡೆ ಕಾಮಗಾರಿಗಳ ಅನುಷ್ಠಾನ ಆಮೆಗತಿಯಲ್ಲಿದೆ ಎಂದು ಡಿಇಎ ಹೇಳಿದೆ. ಅಲ್ಲದೆ, ಡಿಇಎ ಅಧಿಕಾರಿಗಳು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ದೂರವಾಣಿ ಕರೆ ಮಾಡಿದ್ದು, ವಿವರಣೆ ನೀಡಲು ಸೂಚಿಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/punjab-congress-crisis-ambika-soni-declines-next-chief-minister-post-867987.html" itemprop="url">ಪಂಜಾಬ್: ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದ ಅಂಬಿಕಾ ಸೋನಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>