<p><strong>ರಾಯಪುರ್</strong>: ಛತ್ತೀಸ್ಗಢ ರಾಜ್ಯದ 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರ್ಯಾಂಕ್ ಬಂದವರಿಗೆ (ಟಾಪರ್ಸ್) ಅಲ್ಲಿನ ಸರ್ಕಾರ ಪ್ರೋತ್ಸಾಹ ಕ್ರಮವಾಗಿ ಶನಿವಾರ ಹೆಲಿಕಾಪ್ಟರ್ ಪ್ರಯಾಣವನ್ನು ಆಯೋಜಿಸಿತ್ತು.</p><p>ಈ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳು ಭಾಗವಹಿಸಿ ಹೆಲಿಕಾಪ್ಟರ್ ಪಯಣದ ಆನಂದವನ್ನು ಅನುಭವಿಸಿದರು.</p><p>ವಾರ್ತಾ ಇಲಾಖೆಯಿಂದ ಈ ಕಾರ್ಯಕ್ರಮವನ್ನು ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಏಳು ಸೀಟ್ಗಳ ಹೆಲಿಕಾಪ್ಟರ್ನಲ್ಲಿ ವಿದ್ಯಾರ್ಥಿಗಳು ಕನಿಷ್ಠ ಅರ್ಧ ಗಂಟೆ ಪಯಣವನ್ನು ಸರದಿಯಾಗಿ ಮಾಡಿದರು. ಶಿಕ್ಷಣ ಸಚಿವ ಪ್ರೇಮಸಾಯಿ ಸಿಂಗ್ ಈ ವೇಳೆ ಹಾಜರಿದ್ದರು.</p>.<p>ಇದರಲ್ಲಿ 10 ವಿದ್ಯಾರ್ಥಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರಯುಕ್ತ ‘ಆತ್ಮಾನಂದ ಮಾಧವಿ ಛತ್ರ ಪ್ರೋತ್ಸಾಹ’ ಯೋಜನೆಯನ್ನು ಸಿಎಂ ಭೂಪೇಶ್ ಬಗೇಲಾ ಅವರು ಕಳೆದ ವರ್ಷ ಜಾರಿಗೆ ತಂದಿದ್ದರು. ಕಳೆದ ವರ್ಷ 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪಯಣವನ್ನು ಆನಂದಿಸಿದ್ದರು. ಛತ್ತೀಸ್ಗಢ ರಾಜ್ಯ ಸರ್ಕಾರವೇ ಈ ಯೋಜನೆಗೆ ಹಣಕಾಸನ್ನು ಒದಗಿಸುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ್</strong>: ಛತ್ತೀಸ್ಗಢ ರಾಜ್ಯದ 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರ್ಯಾಂಕ್ ಬಂದವರಿಗೆ (ಟಾಪರ್ಸ್) ಅಲ್ಲಿನ ಸರ್ಕಾರ ಪ್ರೋತ್ಸಾಹ ಕ್ರಮವಾಗಿ ಶನಿವಾರ ಹೆಲಿಕಾಪ್ಟರ್ ಪ್ರಯಾಣವನ್ನು ಆಯೋಜಿಸಿತ್ತು.</p><p>ಈ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳು ಭಾಗವಹಿಸಿ ಹೆಲಿಕಾಪ್ಟರ್ ಪಯಣದ ಆನಂದವನ್ನು ಅನುಭವಿಸಿದರು.</p><p>ವಾರ್ತಾ ಇಲಾಖೆಯಿಂದ ಈ ಕಾರ್ಯಕ್ರಮವನ್ನು ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಏಳು ಸೀಟ್ಗಳ ಹೆಲಿಕಾಪ್ಟರ್ನಲ್ಲಿ ವಿದ್ಯಾರ್ಥಿಗಳು ಕನಿಷ್ಠ ಅರ್ಧ ಗಂಟೆ ಪಯಣವನ್ನು ಸರದಿಯಾಗಿ ಮಾಡಿದರು. ಶಿಕ್ಷಣ ಸಚಿವ ಪ್ರೇಮಸಾಯಿ ಸಿಂಗ್ ಈ ವೇಳೆ ಹಾಜರಿದ್ದರು.</p>.<p>ಇದರಲ್ಲಿ 10 ವಿದ್ಯಾರ್ಥಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರಯುಕ್ತ ‘ಆತ್ಮಾನಂದ ಮಾಧವಿ ಛತ್ರ ಪ್ರೋತ್ಸಾಹ’ ಯೋಜನೆಯನ್ನು ಸಿಎಂ ಭೂಪೇಶ್ ಬಗೇಲಾ ಅವರು ಕಳೆದ ವರ್ಷ ಜಾರಿಗೆ ತಂದಿದ್ದರು. ಕಳೆದ ವರ್ಷ 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪಯಣವನ್ನು ಆನಂದಿಸಿದ್ದರು. ಛತ್ತೀಸ್ಗಢ ರಾಜ್ಯ ಸರ್ಕಾರವೇ ಈ ಯೋಜನೆಗೆ ಹಣಕಾಸನ್ನು ಒದಗಿಸುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>