ರಾಂಚಿ (ಜಾರ್ಖಂಡ್): ಭವಿಷ್ಯದ ಪರ್ವತಾರೋಹಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ನೀತಿಯೊಂದನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಕೋಲ್ ಇಂಡಿಯಾ ಲಿಮಿಟೆಡ್ನ (ಸಿಐಎಲ್) ಅಧ್ಯಕ್ಷ ಪಿ.ಎಂ. ಪ್ರಸಾದ್ ಭಾನುವಾರ ಹೇಳಿದ್ದಾರೆ.
‘ಎವರೆಸ್ಟ್ ಶೃಂಗಸಭೆ’ಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪರ್ವತಾರೋಹಣವು ಕಷ್ಟದ ಕೆಲಸ ಮಾತ್ರವಲ್ಲ ವೆಚ್ಚದಾಯಕವೂ ಹೌದು ಎಂದಿದ್ದಾರೆ.
ರಾಂಚಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಮೌಂಟ್ ಎವರೆಸ್ಟ್ ಏರಿದ್ದ 14 ಮಂದಿ ಪರ್ವತಾರೋಹಿಗಳನ್ನು ಸನ್ಮಾನಿಸಲಾಯಿತು.