ಗಣಿಗಾರಿಕೆ ಯೋಜನೆಗೆ ಭೂಮಿ ನೀಡಿದವರಿಗೆ ಸರ್ಕಾರ ಆಕರ್ಷಕ ಪ್ಯಾಕೇಜ್ ನೀಡುತ್ತಿದೆ. ಯೋಜನೆಯಿಂದ ಭೂಮಿ ಅಥವಾ ಮನೆ ಕಳೆದುಕೊಂಡ ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ಸಿಗಲಿದೆ. ಸಂತ್ರಸ್ತರಿಗೆ ₹ 10,000 ಕೋಟಿ ಪ್ಯಾಕೇಜ್ ನೀಡಲು ಸರ್ಕಾರ ನಿರ್ಧರಿಸಿದೆ. ಕೃಷಿ ಕಾರ್ಮಿಕರಿಗೂ ಇದರಲ್ಲಿ ಪರಿಹಾರ ಸಿಗಲಿದೆ ಎಂದು ಮಮತಾ ಹೇಳಿದ್ಧಾರೆ.