ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು. ತಮ್ಮ ಪ್ರಚಾರ ಸಾಮಗ್ರಿಗಳಲ್ಲಿ ಈ ಕರಪತ್ರಗಳನ್ನು ಹೊರಗಿನ ಯಾರೋ ಸೇರಿಸಿದ್ದಾರೆ. ಹಾಗಾಗಿ ಸುಳ್ಳು ಆರೋಪದ ಆಧಾರದಲ್ಲಿ ತೀರ್ಪು ನೀಡಲಾಗಿದೆ. ತಮಗೆ ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆ ಇದೆ. ಯಾವತ್ತೂ ಕೋಮು ರಾಜಕಾರಣ ಮಾಡಿಲ್ಲ. ಅದೂ ಅಲ್ಲದೆ, ಮುಸ್ಲಿಮರು ಶೇಕಡ 20ರಷ್ಟಿರುವ ಕ್ಷೇತ್ರದಲ್ಲಿ ಇಂತಹ ಕಾರ್ಯತಂತ್ರ ಅನುಸರಿಸುವುದು ತಾರ್ಕಿಕವೂ ಅಲ್ಲ ಎಂದು ಶಾಜಿ ಹೇಳಿದ್ದಾರೆ.