<p><strong>ನವದೆಹಲಿ:</strong> ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಇಸ್ರೇಲ್ಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ‘ಎಪ್ಸ್ಟೈನ್ ಫೈಲ್ಸ್’ ವಿಚಾರ ಮುಂದಿಟ್ಟುಕೊಂಡು ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದೆ.</p>. <p>‘ಮೋದಿ, ಅಮೆರಿಕ ಮತ್ತು ಇಸ್ರೇಲ್ನ ಕೈಗೊಂಬೆ’ ಎಂದು ಆರೋಪಿಸಿರುವ ಕಾಂಗ್ರೆಸ್,‘ಇಸ್ರೇಲ್ಗೆ ಭೇಟಿಯ ಸಂದರ್ಭದಲ್ಲಿ, ಗಾಜಾದಲ್ಲಿ ನಡೆದ ನರಮೇಧ ಕುರಿತು ಮೋದಿ ಪ್ರಸ್ತಾಪಿಸುವರೇ’ ಎಂದು ಪ್ರಶ್ನಿಸಿದೆ.</p>. <p>‘ಇಸ್ರೇಲ್ನೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ ಮೋದಿ ಸರ್ಕಾರದ ನೀತಿಯನ್ನು ರೂಪಿಸಿದ್ದು ವಿದೇಶಾಂಗ ಸಚಿವಾಲಯವಲ್ಲ. ಅದನ್ನು ರೂಪಿಸಿದ್ದು ಜೆಫ್ರಿ ಎಪ್ಸ್ಟೈನ್, ಇಸ್ರೇಲ್ ಮಾಜಿ<br>ಪ್ರಧಾನಿ ಇ.ಬರಾಕ್, ಅನಿಲ್ ಅಂಬಾನಿ ಹಾಗೂ ಹರದೀಪ್ ಸಿಂಗ್ ಪುರಿ ಎಂಬುದಾಗಿ 2017ರ ಇ–ಮೇಲ್ಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಎಪ್ಸ್ಟೈನ್ ಫೈಲ್ಸ್’ನಲ್ಲಿ ಹೇಳಲಾಗಿದೆ’ ಎಂದು ಕಾಂಗ್ರೆಸ್ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಹೇಳಿದ್ದಾರೆ.</p> .<div><blockquote>ಅಮೆರಿಕ–ಭಾರತ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ರದ್ದುಗೊಳಿಸುವಂತೆ ಸವಾಲು ಹಾಕಿ 24 ಗಂಟೆಯೂ ಆಗಿಲ್ಲ. ಅಷ್ಟರೊಳಗೇ ಪ್ರಧಾನಿ ಇಸ್ರೇಲ್ಗೆ ಹಾರಿದ್ದಾರೆ </blockquote><span class="attribution">ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಇಸ್ರೇಲ್ಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ‘ಎಪ್ಸ್ಟೈನ್ ಫೈಲ್ಸ್’ ವಿಚಾರ ಮುಂದಿಟ್ಟುಕೊಂಡು ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದೆ.</p>. <p>‘ಮೋದಿ, ಅಮೆರಿಕ ಮತ್ತು ಇಸ್ರೇಲ್ನ ಕೈಗೊಂಬೆ’ ಎಂದು ಆರೋಪಿಸಿರುವ ಕಾಂಗ್ರೆಸ್,‘ಇಸ್ರೇಲ್ಗೆ ಭೇಟಿಯ ಸಂದರ್ಭದಲ್ಲಿ, ಗಾಜಾದಲ್ಲಿ ನಡೆದ ನರಮೇಧ ಕುರಿತು ಮೋದಿ ಪ್ರಸ್ತಾಪಿಸುವರೇ’ ಎಂದು ಪ್ರಶ್ನಿಸಿದೆ.</p>. <p>‘ಇಸ್ರೇಲ್ನೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ ಮೋದಿ ಸರ್ಕಾರದ ನೀತಿಯನ್ನು ರೂಪಿಸಿದ್ದು ವಿದೇಶಾಂಗ ಸಚಿವಾಲಯವಲ್ಲ. ಅದನ್ನು ರೂಪಿಸಿದ್ದು ಜೆಫ್ರಿ ಎಪ್ಸ್ಟೈನ್, ಇಸ್ರೇಲ್ ಮಾಜಿ<br>ಪ್ರಧಾನಿ ಇ.ಬರಾಕ್, ಅನಿಲ್ ಅಂಬಾನಿ ಹಾಗೂ ಹರದೀಪ್ ಸಿಂಗ್ ಪುರಿ ಎಂಬುದಾಗಿ 2017ರ ಇ–ಮೇಲ್ಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಎಪ್ಸ್ಟೈನ್ ಫೈಲ್ಸ್’ನಲ್ಲಿ ಹೇಳಲಾಗಿದೆ’ ಎಂದು ಕಾಂಗ್ರೆಸ್ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಹೇಳಿದ್ದಾರೆ.</p> .<div><blockquote>ಅಮೆರಿಕ–ಭಾರತ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ರದ್ದುಗೊಳಿಸುವಂತೆ ಸವಾಲು ಹಾಕಿ 24 ಗಂಟೆಯೂ ಆಗಿಲ್ಲ. ಅಷ್ಟರೊಳಗೇ ಪ್ರಧಾನಿ ಇಸ್ರೇಲ್ಗೆ ಹಾರಿದ್ದಾರೆ </blockquote><span class="attribution">ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>