ಈ ಬೆಳವಣಿಗೆ ಅವರು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದರ ಸೂಚನೆ ಎಂದೇ ಮುಖಂಡರು ಭಾವಿಸಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ, ಉತ್ತರ ಪ್ರದೇಶ ಕಾಂಗ್ರೆಸ್ ಘಟಕಗಳನ್ನು ಬರ್ಖಾಸ್ತು ಮಾಡಲಾಗಿದೆ. ಇತರರಾಜ್ಯಗಳಲ್ಲಿಯೂ ಇಂಥದೇ ಕ್ರಮ ನಿರೀಕ್ಷಿಸಲಾಗಿತ್ತು. ಈಗ, ಚುನಾವಣೆ ನಡೆಯಲಿರುವ ರಾಜ್ಯಗಳತ್ತ ರಾಹುಲ್ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.