ಭೋಪಾಲ್:ಇಂಧನ ದರ ಏರಿಕೆಯನ್ನು ವಿರೋಧಿಸಿ ಸೈಕಲ್ ಜಾಥಾ ನಡೆಸಿದ ಆರೋಪದ ಮೇಲೆಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಾಗೂ ಪಕ್ಷದ 150 ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 188, 143, 269 ಮತ್ತು 270ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಂಧನ ದರ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ವಿರೋಧಿಸಿಪಕ್ಷದ ಕಾರ್ಯಕರ್ತರೊಂದಿಗೆ ಬುಧವಾರ ಜಾಥಾದಲ್ಲಿ ಭಾಗವಹಿಸಿದ್ದ ಸಿಂಗ್, ದರ ಏರಿಕೆಯು ಪ್ರಧಾನಿ ನರೇಂದ್ರಮೋದಿ ಅವರಿಗೆ ‘ವಿಪತ್ತಿನ ಕಾಲದ ಅವಕಾಶ’ವಾಗಿದೆ ಎಂದು ಟೀಕಿಸಿದ್ದರು.
ಇಲ್ಲಿನ ರೋಷನ್ಪುರ ಬಳಿಯಿಂದಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.
ಬಳಿಕ ಮಾತನಾಡಿದ್ದ ಸಿಂಗ್, ‘ಇಂದು ಜನರು ಕೋವಿಡ್–19 ಸೋಂಕಿಗೆ ತುತ್ತಾಗುತ್ತಿರುವಾಗ, ಹಣದುಬ್ಬರ ಪ್ರಮಾಣವು ಏರಿಕೆಯಾಗುತ್ತಿದೆ. ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸತತ 18ನೇ ದಿನವೂ ಹೆಚ್ಚಿಸಿದೆ’
‘ಮೋದಿ ಜೀ ಹೇಳುವಂತೆ, ಇದು ವಿಪತ್ತಿನಿಂದಾದ ಅವಕಾಶ. ಕೊರೊನಾ ದುರಂತವುಹಣ ಸಂಗ್ರಹಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ’ ಎಂದು ಟೀಕಿಸಿದ್ದರು.