<p><strong>ಸಾಂಗ್ಲಿ:</strong> ಆರು ತಿಂಗಳಿಂದ ಮೂರು ವರ್ಷ ವಯಸ್ಸಿನ ಮಕ್ಕಳಿಗಾಗಿ ಅಂಗನವಾಡಿಯಲ್ಲಿ ವಿತರಿಸಲಾಗುವ ಆಹಾರದ ಪೊಟ್ಟಣದಲ್ಲಿ ಸತ್ತಿದ್ದ ಹಾವಿನಮರಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ನಲ್ಲಿ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.</p>.<p>ಮಗುವೊಂದರ ಪೋಷಕರು ಘಟನೆ ಕುರಿತು ಸೋಮವಾರ ಮಾಹಿತಿ ನೀಡಿದರು ಎಂದು ರಾಜ್ಯ ಅಂಗನವಾಗಿ ಕಾರ್ಯಕರ್ತರ ಸಂಘದ ಉಪಾಧ್ಯಕ್ಷೆ ಆನಂದಿ ಭೋಸಲೆ ಅವರು ಹೇಳಿದ್ದಾರೆ.</p>.<p>ಈ ಘಟನೆಯು ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ಕಲಾಪದ ವೇಳೆ ಪಲುಸ್– ಕಾಡೆಗಾವ್ನ ಕಾಂಗ್ರೆಸ್ ಶಾಸಕ ವಿಶ್ವಜಿತ್ ಕದಮ್ ಈ ಘಟನೆಯನ್ನು ಪ್ರಸ್ತಾಪಿಸಿದರು. ‘ಇದೊಂದು ಗಂಭೀರ ಘಟನೆ. ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘ಆಹಾರ ಪೊಟ್ಟಣದಲ್ಲಿದ್ದ ಹಾವಿನಮರಿಯ ಚಿತ್ರ ತೆಗೆದ ಪೋಷಕರು ಅದನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದರು. ಆ ಕಾರ್ಯಕರ್ತೆಯು ಅದನ್ನು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಗುಂಪಿಗೆ ಕಳುಹಿಸಿದ್ದರು. ನಾವು ಪೊಟ್ಟಣದಲ್ಲಿದ್ದ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ’ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಜುಲೈ 2ರಂದು ನಡೆದ ಸಭೆಯಲ್ಲಿ ಈ ಘಟನೆ ಕುರಿತು ಪ್ರಸ್ತಾಪಿಸಲಾಯಿತು. ಸಾಂಗ್ಲಿ ಜಿಲ್ಲಾ ಪರಿಷತ್ನ ಉಪ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಯಾದವ್ ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆಹಾರ ಪೊಟ್ಟಣಗಳ ದಾಸ್ತಾನು ಇರುವ ಉಗ್ರಾಣವನ್ನು ಮೊಹರು ಮಾಡಲಾಗಿದೆ ಎಂದು ಆನಂದಿ ಭೋಸಲೆ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಂಗ್ಲಿ:</strong> ಆರು ತಿಂಗಳಿಂದ ಮೂರು ವರ್ಷ ವಯಸ್ಸಿನ ಮಕ್ಕಳಿಗಾಗಿ ಅಂಗನವಾಡಿಯಲ್ಲಿ ವಿತರಿಸಲಾಗುವ ಆಹಾರದ ಪೊಟ್ಟಣದಲ್ಲಿ ಸತ್ತಿದ್ದ ಹಾವಿನಮರಿ ಪತ್ತೆಯಾದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲುಸ್ನಲ್ಲಿ ನಡೆದಿದೆ. ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.</p>.<p>ಮಗುವೊಂದರ ಪೋಷಕರು ಘಟನೆ ಕುರಿತು ಸೋಮವಾರ ಮಾಹಿತಿ ನೀಡಿದರು ಎಂದು ರಾಜ್ಯ ಅಂಗನವಾಗಿ ಕಾರ್ಯಕರ್ತರ ಸಂಘದ ಉಪಾಧ್ಯಕ್ಷೆ ಆನಂದಿ ಭೋಸಲೆ ಅವರು ಹೇಳಿದ್ದಾರೆ.</p>.<p>ಈ ಘಟನೆಯು ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, ಕಲಾಪದ ವೇಳೆ ಪಲುಸ್– ಕಾಡೆಗಾವ್ನ ಕಾಂಗ್ರೆಸ್ ಶಾಸಕ ವಿಶ್ವಜಿತ್ ಕದಮ್ ಈ ಘಟನೆಯನ್ನು ಪ್ರಸ್ತಾಪಿಸಿದರು. ‘ಇದೊಂದು ಗಂಭೀರ ಘಟನೆ. ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘ಆಹಾರ ಪೊಟ್ಟಣದಲ್ಲಿದ್ದ ಹಾವಿನಮರಿಯ ಚಿತ್ರ ತೆಗೆದ ಪೋಷಕರು ಅದನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದರು. ಆ ಕಾರ್ಯಕರ್ತೆಯು ಅದನ್ನು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಗುಂಪಿಗೆ ಕಳುಹಿಸಿದ್ದರು. ನಾವು ಪೊಟ್ಟಣದಲ್ಲಿದ್ದ ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ’ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಜುಲೈ 2ರಂದು ನಡೆದ ಸಭೆಯಲ್ಲಿ ಈ ಘಟನೆ ಕುರಿತು ಪ್ರಸ್ತಾಪಿಸಲಾಯಿತು. ಸಾಂಗ್ಲಿ ಜಿಲ್ಲಾ ಪರಿಷತ್ನ ಉಪ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಯಾದವ್ ಅವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆಹಾರ ಪೊಟ್ಟಣಗಳ ದಾಸ್ತಾನು ಇರುವ ಉಗ್ರಾಣವನ್ನು ಮೊಹರು ಮಾಡಲಾಗಿದೆ ಎಂದು ಆನಂದಿ ಭೋಸಲೆ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>