ಈ ಸಂದರ್ಭ ಹಾಜರಿದ್ದ ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಎಲ್ಲ ಶಾಸಕರು ಗೊತ್ತುವಳಿ ಪರ ಮತ ಚಲಾಯಿಸಿದರು. ಗೊತ್ತುವಳಿ ವಿರುದ್ಧ ಯಾರೂ ಮತ ಚಲಾಯಿಸಿಲ್ಲ. ಉಪಸಭಾಪತಿ ರಾಖಿ ಬಿರ್ಲಾ ಜೊತೆಗೆ ವಾಗ್ವಾದ ನಡೆಸಿದ ಕಾರಣಕ್ಕೆ ಬಿಜೆಪಿ ಶಾಸಕರಾದ ವಿಜೇಂದರ್ ಗುಪ್ತ, ಅಭಯ್ ವರ್ಮ ಮತ್ತು ಮೋಹನ್ ಸಿಂಗ್ ಬಿಶ್ಠ್ ಅವರನ್ನು ಹೊರಗೆ ಕಳುಹಿಸಲಾಯಿತು. ಉಳಿದ ಶಾಸಕರು ಪ್ರತಿಭಟಿಸಿ ಸಭೆಯಿಂದ ಹೊರನಡೆದರು.