ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ 'ದೇಶಭಕ್ತಿ ಬಜೆಟ್' ಮಂಡಿಸಿದ್ದಾರೆ.
"75 ವರ್ಷಗಳ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಮಾರ್ಚ್ 12 ರಿಂದ ಕೇಂದ್ರದಿಂದ ಪ್ರಾರಂಭವಾಗುವ 75 ವಾರಗಳ 'ದೇಶಭಕ್ತಿ ಮಹೋತ್ಸವ'ದ ಆಚರಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು ನಾನು ಈ 'ದೇಶಭಕ್ತಿ ಬಜೆಟ್' ಅನ್ನು ಪ್ರಸ್ತುತಪಡಿಸುತ್ತೇನೆ. ಈ ಬಜೆಟ್ ಭಾರತದ 75 ಮತ್ತು 100 ವರ್ಷಗಳ ಸ್ವಾತಂತ್ರ್ಯದ ಮೇಲೆ ಕೇಂದ್ರೀಕರಿಸುತ್ತದೆ" ಅವರು ಹೇಳಿದರು.
Today I present this 'Deshbhakti Budget' in view of the Centre's celebrations of India's 75 years of independence with 75 weeks as 'Deshbhakti Mahotsav' starting on March 12. This Budget will focus on India's 75 as well as 100 years of independence: Delhi Dy CM Manish Sisodia pic.twitter.com/yrPJcAmLil
2047 ರ ವೇಳೆಗೆ ದೆಹಲಿ ನಗರದ ತಲಾದಾಯವನ್ನು ಸಿಂಗಾಪುರದ ಮಟ್ಟಕ್ಕೆ ಹೆಚ್ಚಿಸಲು ದೆಹಲಿ ಸರ್ಕಾರ ಉದ್ದೇಶಿಸಿದೆ ಎಂದು ಸಿಸೋಡಿಯಾ ಹೇಳಿದರು.
"ದೇಶಭಕ್ತಿ ಬಜೆಟ್" ಅಡಿಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ 500 ಸ್ಥಳಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಧ್ವಜ ಸ್ತಂಭ ಸ್ಥಾಪನೆಗೆ 45 ಕೋಟಿ ರೂ.ಗೆ ನಗರಾಡಳಿತ ಪ್ರಸ್ತಾವನೆ ಇಟ್ಟಿದೆ ಎಂದು ಹೇಳಿದ್ದಾರೆ.
ಇದರ ಭಾಗವಾಗಿ, ನಗರದ ಶಾಲೆಗಳಲ್ಲಿ "ದೇಶಭಕ್ತಿ ಪೀರಿಯಡ್" ಇರುತ್ತದೆ. 75 ವಾರಗಳ "ದೇಶಭಕ್ತಿ" ಸಂಭ್ರಮಾಚರಣೆಯಲ್ಲಿ ಭಗತ್ ಸಿಂಗ್ ಅವರ ಜೀವನದ ಕುರಿತಾದ ಕಾರ್ಯಕ್ರಮಗಳಿಗೆ 10 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
2020-21ರ ಬಜೆಟ್ಗಿಂತ ಈ ವರ್ಷದ ಬಜೆಟ್ನಲ್ಲಿ ಒಟ್ಟು ವಿನಿಯೋಗವು ಶೇಕಡಾ 6.1 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.