<p><strong>ಚಂಡೀಗಢ:</strong> ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರು ಮತ್ತೆ 21 ದಿನಗಳ ಪೆರೋಲ್/ಫಲೋ (ತಾತ್ಕಾಲಿಕ ಅವಧಿಗೆ ಬಿಡುಗಡೆ) ಮೇಲೆ ಹರಿಯಾಣದ ರೋಹ್ಟಕ್ನ ಸುನಾರಿಯಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. </p>.<p>ಅತ್ಯಾಚಾರ ಆರೋಪ ಸಾಬೀತಾಗಿ 2017ರಲ್ಲಿ ಜೈಲು ಶಿಕ್ಷೆ ಅನುಭವಿಸಲು ಆರಂಭಿಸಿದ ನಂತರ ಅವರು ಪೆರೋಲ್ ಮೂಲಕ ಬಿಡುಗಡೆಯಾಗುತ್ತಿರುವುದು ಇದು 10ನೇ ಬಾರಿ. ಈವರೆಗೆ, ಪೆರೋಲ್ ಅಡಿಯಲ್ಲಿ 235 ದಿನಗಳ ಕಾಲ ಅವರು ಕಾರಾಗೃಹದಿಂದ ಹೊರಗಿದ್ದರು. </p>.<p>ಹರಿಯಾಣ ಚುನಾವಣೆ ಹತ್ತಿರದಲ್ಲಿ ಇರುವಾಗ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಚ್ಚರಿ ಎಂದರೆ, ಹರಿಯಾಣ, ಪಂಜಾಬ್ ಅಥವಾ ರಾಜಸ್ಥಾನಗಳಲ್ಲಿ ನಡೆಯುವ ಒಂದಿಲ್ಲೊಂದು ಚುನಾವಣೆ ಸಂದರ್ಭದಲ್ಲೇ ರಹೀಂ ಜೈಲಿನಿಂದ ಹೊರಗಡೆ ಬರುತ್ತಿದ್ದಾರೆ. 10 ಬಾರಿಯ ಪೆರೋಲ್ಗಳಲ್ಲಿ, ಆರು ಬಾರಿ ಚುನಾವಣೆಯ ಸಂದರ್ಭಗಳಲ್ಲೇ ಸಿಕ್ಕಿದೆ! </p>.<p>ಯಾವಾಗೆಲ್ಲ ಪೆರೋಲ್?: 2020ರ ಅ.24ರಂದು ಅನಾರೋಗ್ಯ ಪೀಡಿತ ತಾಯಿಯ ಭೇಟಿಗೆ ಒಂದು ದಿನದ ಪೆರೋಲ್ ರಹೀಂಗೆ ಸಿಕ್ಕಿತ್ತು. 2021ರ ಮೇ 21ರಂದು ಮತ್ತೆ ಇದೇ ಉದ್ದೇಶಕ್ಕೆ ಒಂದು ದಿನ ಮಟ್ಟಿಗೆ ಜೈಲಿನಿಂದ ಹೊರಬಂದಿದ್ದರು. </p>.<p>2022ರ ಫೆಬ್ರುವರಿಯಲ್ಲಿ (ಫೆ.7ರಿಂದ ಫ.21) ಪಂಜಾಬ್ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ 21 ದಿನಗಳ ಕಾಲ ಜೈಲಿನಿಂದ ಬಿಡುಗಡೆಗೊಂಡಿದ್ದರು. </p>.<p>ಅದೇ ವರ್ಷ ಜೂನ್ 17ರಿಂದ ಜುಲೈ 18ರವರೆಗೆ 30 ದಿನಗಳ ಪೆರೋಲ್ ಅವರಿಗೆ ಸಿಕ್ಕಿತ್ತು. ಆಗ ಹರಿಯಾಣ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರದಲ್ಲಿತ್ತು. </p>.<p>2022ರಲ್ಲಿ ಅ.15ರಿಂದ ಮ.25ರವರೆಗೆ, ಅದಂಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನ 40 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು. </p>.<p>2023ರ ಜ.31ರಿಂದ ಮಾರ್ಚ್ 3ರವರೆಗೆ 40 ದಿನಗಳ ಪೆರೋಲ್ ಸಿಕ್ಕಿತ್ತು. </p>.<p>ಅದೇ ವರ್ಷ ಜುಲೈ–ಆಗಸ್ಟ್ನಲ್ಲಿ ಹರಿಯಾಣ ಪಂಚಾಯಿತಿ ಚುನಾವಣೆಗೂ ಮುನ್ನ ತಿಂಗಳ ಕಾಲ ಜೈಲಿನಿಂದ ಬಿಡುಗಡೆಯಾಗಿದ್ದರು.</p>.<p>ಈ ವರ್ಷದ (2024) ಜನವರಿ 19ರಿಂದ ಮಾರ್ಚ್ 10ರವರೆಗೆ 50 ದಿನಗಳ ಪೆರೋಲ್ ಸಿಕ್ಕಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮೂರು ದಿನಗಳ ಮೊದಲು ಜೈಲಿನಿಂದ ಹೊರಬಂದಿದ್ದರು.</p>.<p>ಆ ಬಳಿಕ, ಈಗ ಮತ್ತೆ 21 ದಿನಗಳ ಅವಧಿಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹತ್ತಿರದಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯೂ ಇದೆ. </p>.<p>ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಗುರ್ಮೀತ್ ರಾಮ್ ರಹೀಂ ಅವರು ರಾಜಕೀಯವಾಗಿ ಪ್ರಭಾವಿಯಾಗಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರೊಂದಿಗೂ ಆತ್ಮೀಯ ಒಡನಾಟ ಹೊಂದಿರುವ ಅವರು, ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಹಲವು ಪಕ್ಷಗಳಿಗೆ ಈ ಹಿಂದೆ ಬೆಂಬಲವನ್ನೂ ನೀಡಿದ್ದರು. </p>.<p>ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ರಹೀಂ ಅವರು 2017ರ ಆ.25ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. </p>.<p>ಹೆಚ್ಚುವರಿಯಾಗಿ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮತ್ತು ಡೇರಾ ಸಚ್ಚಾ ಸೌದಾದ ಮಾಜಿ ಮ್ಯಾನೇಜರ್ ರಂಜಿತ್ ಹತ್ಯೆ ಪ್ರಕರಣದಲ್ಲಿ 2021ರ ಅಕ್ಟೋಬರ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. </p>.<p>ಆದರೆ, ಎರಡನೇ ಪ್ರಕರಣದಲ್ಲಿ ಹೈಕೋರ್ಟ್ ರಹೀಂ ಹಾಗೂ ಇತರರನ್ನು ಖುಲಾಸೆ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ:</strong> ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರು ಮತ್ತೆ 21 ದಿನಗಳ ಪೆರೋಲ್/ಫಲೋ (ತಾತ್ಕಾಲಿಕ ಅವಧಿಗೆ ಬಿಡುಗಡೆ) ಮೇಲೆ ಹರಿಯಾಣದ ರೋಹ್ಟಕ್ನ ಸುನಾರಿಯಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. </p>.<p>ಅತ್ಯಾಚಾರ ಆರೋಪ ಸಾಬೀತಾಗಿ 2017ರಲ್ಲಿ ಜೈಲು ಶಿಕ್ಷೆ ಅನುಭವಿಸಲು ಆರಂಭಿಸಿದ ನಂತರ ಅವರು ಪೆರೋಲ್ ಮೂಲಕ ಬಿಡುಗಡೆಯಾಗುತ್ತಿರುವುದು ಇದು 10ನೇ ಬಾರಿ. ಈವರೆಗೆ, ಪೆರೋಲ್ ಅಡಿಯಲ್ಲಿ 235 ದಿನಗಳ ಕಾಲ ಅವರು ಕಾರಾಗೃಹದಿಂದ ಹೊರಗಿದ್ದರು. </p>.<p>ಹರಿಯಾಣ ಚುನಾವಣೆ ಹತ್ತಿರದಲ್ಲಿ ಇರುವಾಗ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಚ್ಚರಿ ಎಂದರೆ, ಹರಿಯಾಣ, ಪಂಜಾಬ್ ಅಥವಾ ರಾಜಸ್ಥಾನಗಳಲ್ಲಿ ನಡೆಯುವ ಒಂದಿಲ್ಲೊಂದು ಚುನಾವಣೆ ಸಂದರ್ಭದಲ್ಲೇ ರಹೀಂ ಜೈಲಿನಿಂದ ಹೊರಗಡೆ ಬರುತ್ತಿದ್ದಾರೆ. 10 ಬಾರಿಯ ಪೆರೋಲ್ಗಳಲ್ಲಿ, ಆರು ಬಾರಿ ಚುನಾವಣೆಯ ಸಂದರ್ಭಗಳಲ್ಲೇ ಸಿಕ್ಕಿದೆ! </p>.<p>ಯಾವಾಗೆಲ್ಲ ಪೆರೋಲ್?: 2020ರ ಅ.24ರಂದು ಅನಾರೋಗ್ಯ ಪೀಡಿತ ತಾಯಿಯ ಭೇಟಿಗೆ ಒಂದು ದಿನದ ಪೆರೋಲ್ ರಹೀಂಗೆ ಸಿಕ್ಕಿತ್ತು. 2021ರ ಮೇ 21ರಂದು ಮತ್ತೆ ಇದೇ ಉದ್ದೇಶಕ್ಕೆ ಒಂದು ದಿನ ಮಟ್ಟಿಗೆ ಜೈಲಿನಿಂದ ಹೊರಬಂದಿದ್ದರು. </p>.<p>2022ರ ಫೆಬ್ರುವರಿಯಲ್ಲಿ (ಫೆ.7ರಿಂದ ಫ.21) ಪಂಜಾಬ್ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ 21 ದಿನಗಳ ಕಾಲ ಜೈಲಿನಿಂದ ಬಿಡುಗಡೆಗೊಂಡಿದ್ದರು. </p>.<p>ಅದೇ ವರ್ಷ ಜೂನ್ 17ರಿಂದ ಜುಲೈ 18ರವರೆಗೆ 30 ದಿನಗಳ ಪೆರೋಲ್ ಅವರಿಗೆ ಸಿಕ್ಕಿತ್ತು. ಆಗ ಹರಿಯಾಣ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರದಲ್ಲಿತ್ತು. </p>.<p>2022ರಲ್ಲಿ ಅ.15ರಿಂದ ಮ.25ರವರೆಗೆ, ಅದಂಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನ 40 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು. </p>.<p>2023ರ ಜ.31ರಿಂದ ಮಾರ್ಚ್ 3ರವರೆಗೆ 40 ದಿನಗಳ ಪೆರೋಲ್ ಸಿಕ್ಕಿತ್ತು. </p>.<p>ಅದೇ ವರ್ಷ ಜುಲೈ–ಆಗಸ್ಟ್ನಲ್ಲಿ ಹರಿಯಾಣ ಪಂಚಾಯಿತಿ ಚುನಾವಣೆಗೂ ಮುನ್ನ ತಿಂಗಳ ಕಾಲ ಜೈಲಿನಿಂದ ಬಿಡುಗಡೆಯಾಗಿದ್ದರು.</p>.<p>ಈ ವರ್ಷದ (2024) ಜನವರಿ 19ರಿಂದ ಮಾರ್ಚ್ 10ರವರೆಗೆ 50 ದಿನಗಳ ಪೆರೋಲ್ ಸಿಕ್ಕಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮೂರು ದಿನಗಳ ಮೊದಲು ಜೈಲಿನಿಂದ ಹೊರಬಂದಿದ್ದರು.</p>.<p>ಆ ಬಳಿಕ, ಈಗ ಮತ್ತೆ 21 ದಿನಗಳ ಅವಧಿಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹತ್ತಿರದಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯೂ ಇದೆ. </p>.<p>ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಗುರ್ಮೀತ್ ರಾಮ್ ರಹೀಂ ಅವರು ರಾಜಕೀಯವಾಗಿ ಪ್ರಭಾವಿಯಾಗಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರೊಂದಿಗೂ ಆತ್ಮೀಯ ಒಡನಾಟ ಹೊಂದಿರುವ ಅವರು, ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಹಲವು ಪಕ್ಷಗಳಿಗೆ ಈ ಹಿಂದೆ ಬೆಂಬಲವನ್ನೂ ನೀಡಿದ್ದರು. </p>.<p>ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ರಹೀಂ ಅವರು 2017ರ ಆ.25ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. </p>.<p>ಹೆಚ್ಚುವರಿಯಾಗಿ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮತ್ತು ಡೇರಾ ಸಚ್ಚಾ ಸೌದಾದ ಮಾಜಿ ಮ್ಯಾನೇಜರ್ ರಂಜಿತ್ ಹತ್ಯೆ ಪ್ರಕರಣದಲ್ಲಿ 2021ರ ಅಕ್ಟೋಬರ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. </p>.<p>ಆದರೆ, ಎರಡನೇ ಪ್ರಕರಣದಲ್ಲಿ ಹೈಕೋರ್ಟ್ ರಹೀಂ ಹಾಗೂ ಇತರರನ್ನು ಖುಲಾಸೆ ಮಾಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>