<p><strong>ಹೈದರಾಬಾದ್</strong>: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ 8 ಸದಸ್ಯರು ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ.</p><p>ಮಹಾರಾಷ್ಟ್ರ ಹಾಗೂ ಛತ್ತೀಸ್ಗಢ ಮೂಲದ ಸಿಪಿಐ(ಎಂ)ನ ಒಬ್ಬ ವಿಭಾಗೀಯ ಸಮಿತಿ ಸದಸ್ಯ(ಡಿವಿಸಿಎಂ), ಇಬ್ಬರು ಪ್ರದೇಶ ಸಮಿತಿ ಸದಸ್ಯರು (ಎಸಿಎಂ) ಸೇರಿದಂತೆ ಒಟ್ಟು 8 ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್.ಪಿ. ಅವರ ಮುಂದೆ ಶರಣಾಗಿದ್ದಾರೆ. </p><p>ಈ ವರ್ಷದಲ್ಲಿ ಒಟ್ಟು 355 ನಕ್ಸಲರು ತೆಲಂಗಾಣ ಪೊಲೀಸರ ಬಳಿ ಶರಣಾಗಿದ್ದಾರೆ. ಇದರಲ್ಲಿ 68 ಜನರು ಮುಲುಗು ಪೊಲೀಸರ ಮುಂದೆ ಶರಣಾಗಿದ್ದಾರೆ. </p><p>ತೆಲಂಗಾಣ - ಛತ್ತೀಸ್ಗಢದ ಗಡಿ ಪ್ರದೇಶದಲ್ಲಿ ನಿಷೇಧಿತ ಸಿಪಿಐ(ಮಾವೋವಾದ) ಸದಸ್ಯರ ಚಲನವಲನ ಕಂಡುಬಂದಿದ್ದು, ಗಡಿ ಭಾಗದ ಜನರಿಗೆ ನಕ್ಸಲರೊಂದಿಗೆ ಸಹಕರಿಸದಂತೆ ಮತ್ತು ಅವರ ಚಲನವಲನ ಕಂಡುಬಂದರೆ ಆ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದು ಪೊಲೀಸ್ ಇಲಾಖೆಯು ಮನವಿ ಮಾಡಿದೆ. </p><p>ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ಹಾಗೂ ಅವರನ್ನು ಆಯುಧಗಳ ಸಮೇತ ಶರಣಾಗತಿಯಾಗುವಂತೆ ಮಾಡಲು ತೆಲಂಗಾಣ ಸರ್ಕಾರವು ಹಲವು ಯೋಜನೆಗಳನ್ನು ಕೂಡ ಜಾರಿಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ 8 ಸದಸ್ಯರು ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ.</p><p>ಮಹಾರಾಷ್ಟ್ರ ಹಾಗೂ ಛತ್ತೀಸ್ಗಢ ಮೂಲದ ಸಿಪಿಐ(ಎಂ)ನ ಒಬ್ಬ ವಿಭಾಗೀಯ ಸಮಿತಿ ಸದಸ್ಯ(ಡಿವಿಸಿಎಂ), ಇಬ್ಬರು ಪ್ರದೇಶ ಸಮಿತಿ ಸದಸ್ಯರು (ಎಸಿಎಂ) ಸೇರಿದಂತೆ ಒಟ್ಟು 8 ಮಾವೋವಾದಿಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಬರೀಶ್.ಪಿ. ಅವರ ಮುಂದೆ ಶರಣಾಗಿದ್ದಾರೆ. </p><p>ಈ ವರ್ಷದಲ್ಲಿ ಒಟ್ಟು 355 ನಕ್ಸಲರು ತೆಲಂಗಾಣ ಪೊಲೀಸರ ಬಳಿ ಶರಣಾಗಿದ್ದಾರೆ. ಇದರಲ್ಲಿ 68 ಜನರು ಮುಲುಗು ಪೊಲೀಸರ ಮುಂದೆ ಶರಣಾಗಿದ್ದಾರೆ. </p><p>ತೆಲಂಗಾಣ - ಛತ್ತೀಸ್ಗಢದ ಗಡಿ ಪ್ರದೇಶದಲ್ಲಿ ನಿಷೇಧಿತ ಸಿಪಿಐ(ಮಾವೋವಾದ) ಸದಸ್ಯರ ಚಲನವಲನ ಕಂಡುಬಂದಿದ್ದು, ಗಡಿ ಭಾಗದ ಜನರಿಗೆ ನಕ್ಸಲರೊಂದಿಗೆ ಸಹಕರಿಸದಂತೆ ಮತ್ತು ಅವರ ಚಲನವಲನ ಕಂಡುಬಂದರೆ ಆ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದು ಪೊಲೀಸ್ ಇಲಾಖೆಯು ಮನವಿ ಮಾಡಿದೆ. </p><p>ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲು ಹಾಗೂ ಅವರನ್ನು ಆಯುಧಗಳ ಸಮೇತ ಶರಣಾಗತಿಯಾಗುವಂತೆ ಮಾಡಲು ತೆಲಂಗಾಣ ಸರ್ಕಾರವು ಹಲವು ಯೋಜನೆಗಳನ್ನು ಕೂಡ ಜಾರಿಗೊಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>