<p><strong>ನವದೆಹಲಿ</strong>: ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ನಡುವಿನ ವ್ಯತ್ಯಾಸವನ್ನು ಪಟ್ಟಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣೆ ತಮ್ಮ ಕೈತಪ್ಪಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಚಿತವಾಗಿದೆ ಎಂದಿದ್ದಾರೆ.</p><p>ಈ ಕುರಿತಂತೆ ಎಕ್ಸ್ನಲ್ಲಿ ಬರೆದುಕೊಂಡಿರುವ ರಾಹುಲ್, ‘ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ನಡುವೆ ಸ್ಪಷ್ಟವಾದ ವ್ಯತ್ಯಾಸವಿದ್ದು, ‘ಭಾರತೀಯರ ಸರ್ಕಾರ’ ಎನ್ನುವುದು ಕಾಂಗ್ರೆಸ್ನ ಗ್ಯಾರಂಟಿಯಾದರೆ, ‘ಅದಾನಿ ಸರ್ಕಾರ’ ಬಿಜೆಪಿ ಗ್ಯಾರಂಟಿಯಾಗಿದೆ’ ಎಂದರು.</p><p>‘ಮಹಿಳೆಯರಿಗೆ ಮಾಸಿಕ ₹8,500 ನೀಡುವುದು, 30 ಲಕ್ಷ ಖಾಲಿ ಹುದ್ದೆಗೆ ನೇಮಕಾತಿ ನಡೆಸುವುದು, ಯುವಕರಿಗೆ ಉದ್ಯೋಗ ನೀಡುವ ಮೂಲಕ ವಾರ್ಷಿಕ ₹1 ಲಕ್ಷ ವೇತನ ದೊರೆಯುವಂತೆ ಮಾಡುವುದು ಮತ್ತು ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸುವುದು ಕಾಂಗ್ರೆಸ್ ಗ್ಯಾರಂಟಿಯಾಗಿದೆ’ ಎಂದರು.</p><p>‘ಕೋಟ್ಯಧಿಪತಿಗಳ ಜೇಬಿನಲ್ಲಿ ದೇಶದ ಸಂಪತ್ತನ್ನು ಕ್ರೋಡೀಕರಿಸುವುದು, ಸುಲಿಗೆ ದಂಧೆ ಮೂಲಕ ದೇಣಿಗೆ ವ್ಯಾಪಾರ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮುಗಿಸುವುದು, ರೈತರಿಗೆ ನೋವು ಕೊಡುವುದು ಇದು ಬಿಜೆಪಿ ಗ್ಯಾರಂಟಿಯಾಗಿದೆ’ ಎಂದು ತಿಳಿಸಿದರು.</p><p>‘₹16 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ 10 ವರ್ಷಗಳ ಮೋದಿ ಆಡಳಿತದಲ್ಲಿ ಕೇವಲ 22ರಿಂದ 25 ಮಂದಿ ಕೋಟ್ಯಾಧಿಪತಿಗಳಾದರು. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೋಟಿಗಟ್ಟಲೆ ಜನರನ್ನು ಲಕ್ಷಾಧಿಕಪತಿಗಳನ್ನಾಗಿ ಮಾಡುತ್ತದೆ’ ಎಂದು ಅಮರಾವತಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ತಿಳಿಸಿದರು.</p><p>ಇದೇ ವೇಳೆ ‘ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಬಯಸುತ್ತಿದ್ದು, ಜಗತ್ತಿನ ಯಾವ ಶಕ್ತಿಯಿಂದಲೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ನಡುವಿನ ವ್ಯತ್ಯಾಸವನ್ನು ಪಟ್ಟಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣೆ ತಮ್ಮ ಕೈತಪ್ಪಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಚಿತವಾಗಿದೆ ಎಂದಿದ್ದಾರೆ.</p><p>ಈ ಕುರಿತಂತೆ ಎಕ್ಸ್ನಲ್ಲಿ ಬರೆದುಕೊಂಡಿರುವ ರಾಹುಲ್, ‘ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ನಡುವೆ ಸ್ಪಷ್ಟವಾದ ವ್ಯತ್ಯಾಸವಿದ್ದು, ‘ಭಾರತೀಯರ ಸರ್ಕಾರ’ ಎನ್ನುವುದು ಕಾಂಗ್ರೆಸ್ನ ಗ್ಯಾರಂಟಿಯಾದರೆ, ‘ಅದಾನಿ ಸರ್ಕಾರ’ ಬಿಜೆಪಿ ಗ್ಯಾರಂಟಿಯಾಗಿದೆ’ ಎಂದರು.</p><p>‘ಮಹಿಳೆಯರಿಗೆ ಮಾಸಿಕ ₹8,500 ನೀಡುವುದು, 30 ಲಕ್ಷ ಖಾಲಿ ಹುದ್ದೆಗೆ ನೇಮಕಾತಿ ನಡೆಸುವುದು, ಯುವಕರಿಗೆ ಉದ್ಯೋಗ ನೀಡುವ ಮೂಲಕ ವಾರ್ಷಿಕ ₹1 ಲಕ್ಷ ವೇತನ ದೊರೆಯುವಂತೆ ಮಾಡುವುದು ಮತ್ತು ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸುವುದು ಕಾಂಗ್ರೆಸ್ ಗ್ಯಾರಂಟಿಯಾಗಿದೆ’ ಎಂದರು.</p><p>‘ಕೋಟ್ಯಧಿಪತಿಗಳ ಜೇಬಿನಲ್ಲಿ ದೇಶದ ಸಂಪತ್ತನ್ನು ಕ್ರೋಡೀಕರಿಸುವುದು, ಸುಲಿಗೆ ದಂಧೆ ಮೂಲಕ ದೇಣಿಗೆ ವ್ಯಾಪಾರ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮುಗಿಸುವುದು, ರೈತರಿಗೆ ನೋವು ಕೊಡುವುದು ಇದು ಬಿಜೆಪಿ ಗ್ಯಾರಂಟಿಯಾಗಿದೆ’ ಎಂದು ತಿಳಿಸಿದರು.</p><p>‘₹16 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ 10 ವರ್ಷಗಳ ಮೋದಿ ಆಡಳಿತದಲ್ಲಿ ಕೇವಲ 22ರಿಂದ 25 ಮಂದಿ ಕೋಟ್ಯಾಧಿಪತಿಗಳಾದರು. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೋಟಿಗಟ್ಟಲೆ ಜನರನ್ನು ಲಕ್ಷಾಧಿಕಪತಿಗಳನ್ನಾಗಿ ಮಾಡುತ್ತದೆ’ ಎಂದು ಅಮರಾವತಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ತಿಳಿಸಿದರು.</p><p>ಇದೇ ವೇಳೆ ‘ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಬಯಸುತ್ತಿದ್ದು, ಜಗತ್ತಿನ ಯಾವ ಶಕ್ತಿಯಿಂದಲೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>