ಚಿಕಿತ್ಸೆ ಕಾರಣವೊಂದನ್ನು ಬಿಟ್ಟರೆ, ಬೇರಾವುದೇ ಕಾರಣಕ್ಕೂ ಆನೆಗಳನ್ನು ಸೆರೆ ಹಿಡಿಯದಂತೆ ಸರ್ಕಾರ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿಯು, ಈಗಾಗಲೇ ತನ್ನಲ್ಲಿರುವ ಆನೆ ಹೊರತುಪಡಿಸಿ ಮತ್ತೆ ಬೇರೆ ಆನೆಗಳನ್ನು ಹಿಡಿದು ಸಾಕುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಬ್ಯಾನರ್ಜಿ, ಪಿ.ಡಿ. ಆದಿಕೇಶವುಲು ಅವರಿದ್ದ ಪೀಠ ಹೇಳಿದೆ.