ಮುಂಬೈ: ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಸ್ಟ್ಯಾನ್ ಸ್ವಾಮಿ ಅವರ ನಿಧನವನ್ನು ಸಾಂಸ್ಥಿಕ ಹತ್ಯೆಯೆಂದು ಆರೋಪಿಸಿ, ಪ್ರಕರಣದ 11 ಮಂದಿ ಆರೋಪಿಗಳು ಇಲ್ಲಿನ ತಾನೋಜಿ ಜೈಲಿನಲ್ಲಿ ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಸ್ಟ್ಯಾನ್ ಸ್ವಾಮಿ ಅವರು ಕಳೆದ ವರ್ಷ ಜುಲೈ 5ರಂದು ನಿಧನರಾಗಿದ್ದರು.
ಅಧಿಕೃತರ ನಿರಾಸಕ್ತಿ, ವೈದ್ಯಕೀಯ ಸೌಲಭ್ಯಗಳ ಕೊರತೆಯು ಸ್ವಾಮಿ ಅವರ ಸಾವಿಗೆ ಕಾರಣವಾಗಿತ್ತು. ಜೈಲಿನ ಈ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಜೈಲು ಅಧೀಕ್ಷಕರಿಗೆ ಮತ್ತು ಪ್ರಕರಣದ ವಕೀಲರಿಗೆ ಬರೆದ ಪತ್ರದಲ್ಲಿ ಪ್ರಕರಣದ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧೀರ್ ಧವಳೆ ಆರೋಪಿಸಿದ್ದಾರೆ.