ಡ್ಯಾನಿಶ್ ಅಲಿ ಅವರ ಹೇಳಿಕೆ ಕುರಿತು ತನಿಖೆಗೆ ಸಮಿತಿ ರಚಿಸಲು ಒತ್ತಾಯಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಬಿಜೆಪಿ ಸಂಸದರಾದ ರವಿ ಕಿಶನ್ ಶುಕ್ಲಾ ಮತ್ತು ಹರ್ನಾಥ್ ಸಿಂಗ್ ಯಾದವ್ ಅವರೂ ಭಾನುವಾರ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು, ಡ್ಯಾನಿಶ್ ಅಲಿ ಅವರ ವರ್ತನೆಯನ್ನು ಪ್ರಶ್ನಿಸಿದ್ದಾರೆ.