<p><strong>ಚಂಡೀಗಢ</strong>: ನಾಲ್ಕು ವರ್ಷದ ಬಾಲಕ ಸೇರಿದಂತೆ ಆರು ಜನರ ಕೊಲೆ ಪ್ರಕರಣದ ಅಪರಾಧಿ, ಮಾಜಿ ಕುಸ್ತಿ ಕೋಚ್ಗೆ ಇಲ್ಲಿನ ರೋಹ್ತಕ್ನ ಜಿಲ್ಲಾ ನ್ಯಾಯಾಲಯ ಮರಣದಂಡನೆ ಹಾಗೂ ₹ 1.26 ಲಕ್ಷ ದಂಡವನ್ನು ವಿಧಿಸಿದೆ.</p>.<p>ಮಾಜಿ ಕುಸ್ತಿ ಕೋಚ್ ಸುಖ್ವಿಂದರ್ ಶಿಕ್ಷೆಗೊಳಗಾದವರು. ಐಪಿಸಿಯ ವಿವಿಧ ಸೆಕ್ಷನ್ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಸಾಕ್ಷ್ಯ ನಾಶಪಡಿಸಿದ ಆರೋಪ ಸಾಬೀತಾದ ಕಾರಣ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಗನ್ ಗೀತ್ ಕೌರ್ ಅವರು ಸಜೆ ವಿಧಿಸಿ ಆದೇಶಿಸಿದರು.</p>.<p>ಸೋನೆಪತ್ ಜಿಲ್ಲೆಯ ಬರೌಡ ಗ್ರಾಮದ ಸುಖ್ವಿಂದರ್, ಫೆಬ್ರುವರಿ 12, 2021ರಲ್ಲಿ ಪತ್ನಿ ಸಾಕ್ಷಿ ಮಲ್ಲಿಕ್, ಮನೋಜ್ ಮಲ್ಲಿಕ್, ಪುತ್ರ ಸರ್ತಾಜ್, ಕೋಚ್ಗಳಾಗಿದ್ದ ಸತೀಶ್ ಕುಮಾರ್, ಪ್ರದೀಪ್ ಮಲ್ಲಿಕ್ ಮತ್ತು ಕುಸ್ತಿಪಟು ಪೂಜಾ ಅವರನ್ನು ಹತ್ಯೆ ಮಾಡಿದ್ದರು.</p>.<p>ಘಟನೆಯಲ್ಲಿ ಅಮರಜೀತ್ ಎಂಬವವರು ಗಾಯಗೊಂಡಿದ್ದರು. ರೋಹ್ತಕ್ನ ಖಾಸಗಿ ಕಾಲೇಜಿಗೆ ಹೊಂದಿಕೊಂಡಿದ್ದ ಕುಸ್ತಿ ಆವರಣದಲ್ಲಿ ಕೃತ್ಯ ನಡೆದಿತ್ತು. ದೂರುಗಳ ಹಿನ್ನೆಲೆಯಲ್ಲಿ ಸೇವೆಯಿಂದ ಕೈಬಿಟ್ಟಿದ್ದರಿಂದ ಕುಪಿತರಾಗಿ ಕೃತ್ಯ ಎಸಗಿದ್ದರು ಎಂದು ಪೊಲೀಸರು ಬಳಿಕ ತಿಳಿಸಿದ್ದರು.</p>.<p>ಪಂಜಾಬ್– ಹರಿಯಾಣ ಹೈಕೋರ್ಟ್ ದೃಢೀಕರಿಸುವವರೆಗೂ, ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದೂ ನ್ಯಾಯಾಧೀಶರು ಆದೇಶಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಢ</strong>: ನಾಲ್ಕು ವರ್ಷದ ಬಾಲಕ ಸೇರಿದಂತೆ ಆರು ಜನರ ಕೊಲೆ ಪ್ರಕರಣದ ಅಪರಾಧಿ, ಮಾಜಿ ಕುಸ್ತಿ ಕೋಚ್ಗೆ ಇಲ್ಲಿನ ರೋಹ್ತಕ್ನ ಜಿಲ್ಲಾ ನ್ಯಾಯಾಲಯ ಮರಣದಂಡನೆ ಹಾಗೂ ₹ 1.26 ಲಕ್ಷ ದಂಡವನ್ನು ವಿಧಿಸಿದೆ.</p>.<p>ಮಾಜಿ ಕುಸ್ತಿ ಕೋಚ್ ಸುಖ್ವಿಂದರ್ ಶಿಕ್ಷೆಗೊಳಗಾದವರು. ಐಪಿಸಿಯ ವಿವಿಧ ಸೆಕ್ಷನ್ಗಳು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಸಾಕ್ಷ್ಯ ನಾಶಪಡಿಸಿದ ಆರೋಪ ಸಾಬೀತಾದ ಕಾರಣ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಗನ್ ಗೀತ್ ಕೌರ್ ಅವರು ಸಜೆ ವಿಧಿಸಿ ಆದೇಶಿಸಿದರು.</p>.<p>ಸೋನೆಪತ್ ಜಿಲ್ಲೆಯ ಬರೌಡ ಗ್ರಾಮದ ಸುಖ್ವಿಂದರ್, ಫೆಬ್ರುವರಿ 12, 2021ರಲ್ಲಿ ಪತ್ನಿ ಸಾಕ್ಷಿ ಮಲ್ಲಿಕ್, ಮನೋಜ್ ಮಲ್ಲಿಕ್, ಪುತ್ರ ಸರ್ತಾಜ್, ಕೋಚ್ಗಳಾಗಿದ್ದ ಸತೀಶ್ ಕುಮಾರ್, ಪ್ರದೀಪ್ ಮಲ್ಲಿಕ್ ಮತ್ತು ಕುಸ್ತಿಪಟು ಪೂಜಾ ಅವರನ್ನು ಹತ್ಯೆ ಮಾಡಿದ್ದರು.</p>.<p>ಘಟನೆಯಲ್ಲಿ ಅಮರಜೀತ್ ಎಂಬವವರು ಗಾಯಗೊಂಡಿದ್ದರು. ರೋಹ್ತಕ್ನ ಖಾಸಗಿ ಕಾಲೇಜಿಗೆ ಹೊಂದಿಕೊಂಡಿದ್ದ ಕುಸ್ತಿ ಆವರಣದಲ್ಲಿ ಕೃತ್ಯ ನಡೆದಿತ್ತು. ದೂರುಗಳ ಹಿನ್ನೆಲೆಯಲ್ಲಿ ಸೇವೆಯಿಂದ ಕೈಬಿಟ್ಟಿದ್ದರಿಂದ ಕುಪಿತರಾಗಿ ಕೃತ್ಯ ಎಸಗಿದ್ದರು ಎಂದು ಪೊಲೀಸರು ಬಳಿಕ ತಿಳಿಸಿದ್ದರು.</p>.<p>ಪಂಜಾಬ್– ಹರಿಯಾಣ ಹೈಕೋರ್ಟ್ ದೃಢೀಕರಿಸುವವರೆಗೂ, ಶಿಕ್ಷೆಯನ್ನು ಜಾರಿಗೊಳಿಸಬಾರದು ಎಂದೂ ನ್ಯಾಯಾಧೀಶರು ಆದೇಶಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>