<p><strong>ಮುಂಬೈ:</strong> ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 479 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ಸಚಿವ ಮಕರಂದ್ ಪಾಟೀಲ್ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.</p>.ಕೋಲಾರ: ರಿಜಿಸ್ಟರ್ಡ್ ಮದುವೆ ಮಾಡಿಕೊಂಡ ದಿನವೇ ಆತ್ಮಹತ್ಯೆ.<p>ಪ್ರಶ್ನೋತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿದ ಅವರು, ಮಾರ್ಚ್ನಲ್ಲಿ ಮರಾಠವಾಡ ಮತ್ತು ವಿದರ್ಭದಲ್ಲಿ 250 ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಏಪ್ರಿಲ್ನಲ್ಲಿ ರಾಜ್ಯದಾದ್ಯಂತ 229 ಆತ್ಮಹತ್ಯೆಗಳು ವರದಿಯಾಗಿವೆ ಎಂದು ಹೇಳಿದ್ದಾರೆ.</p><p>ಮಾರ್ಚ್ನಲ್ಲಿ ನಡೆದ 250 ಪ್ರಕರಣಗಳಲ್ಲಿ 102 ಸರ್ಕಾರಿ ನಿಯಮಗಳ ಪ್ರಕಾರ ಆರ್ಥಿಕ ನೆರವಿಗೆ ಅರ್ಹವಾಗಿವೆ ಎಂದು ಕಂಡುಬಂದಿದ್ದು, 77 ಪ್ರಕರಣಗಳಲ್ಲಿ ಮೊತ್ತವನ್ನು ವಿತರಿಸಲಾಗಿದೆ. ಒಟ್ಟು 62 ಅನರ್ಹರು ಎಂದು ಕಂಡುಬಂದಿದ್ದು, 86 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದೆ ಎಂದು ಪಾಟೀಲ್ ತಿಳಿಸಿದ್ದಾರೆ.</p>.ಆನ್ಲೈನ್ ಜೂಜಿನಲ್ಲಿ ವಂಚನೆ: ಯುವಕ ಆತ್ಮಹತ್ಯೆ.<p>‘ಏಪ್ರಿಲ್ನಲ್ಲಿ 229 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 74 ಮಂದಿ ಪರಿಹಾರಕ್ಕೆ ಅರ್ಹರು ಎಂದು ಕಂಡುಬಂದಿದೆ. ಈ 74 ಪ್ರಕರಣಗಳಲ್ಲಿ 33 ಪ್ರಕರಣಗಳ ಹಣವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.</p><p>2006 ಜನವರಿ 24ರ ಸರ್ಕಾರಿ ನಿರ್ಣಯದ (GR) ಪ್ರಕಾರ, ಬೆಳೆ ವೈಫಲ್ಯ, ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಿಂದ ಅಥವಾ ಪರವಾನಗಿ ಪಡೆದ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮರುಪಾವತಿಸಲು ಅಸಮರ್ಥತೆ, ಹೆಚ್ಚುತ್ತಿರುವ ಸಾಲ ಇತ್ಯಾದಿಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರನ್ನು ಆರ್ಥಿಕ ಸಹಾಯಕ್ಕೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಅಂತಹ ರೈತರ ಸಂಬಂಧಿಕರಿಗೆ ₹1 ಲಕ್ಷ ನೀಡಲಾಗುತ್ತದೆ. ಹಣಕಾಸಿನ ನೆರವಿನ ಹೆಚ್ಚಳವು ಪರಿಗಣನೆಯಲ್ಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.</p> .ತಾಯಿಯನ್ನು ಕೊಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 479 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ಸಚಿವ ಮಕರಂದ್ ಪಾಟೀಲ್ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.</p>.ಕೋಲಾರ: ರಿಜಿಸ್ಟರ್ಡ್ ಮದುವೆ ಮಾಡಿಕೊಂಡ ದಿನವೇ ಆತ್ಮಹತ್ಯೆ.<p>ಪ್ರಶ್ನೋತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿದ ಅವರು, ಮಾರ್ಚ್ನಲ್ಲಿ ಮರಾಠವಾಡ ಮತ್ತು ವಿದರ್ಭದಲ್ಲಿ 250 ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಏಪ್ರಿಲ್ನಲ್ಲಿ ರಾಜ್ಯದಾದ್ಯಂತ 229 ಆತ್ಮಹತ್ಯೆಗಳು ವರದಿಯಾಗಿವೆ ಎಂದು ಹೇಳಿದ್ದಾರೆ.</p><p>ಮಾರ್ಚ್ನಲ್ಲಿ ನಡೆದ 250 ಪ್ರಕರಣಗಳಲ್ಲಿ 102 ಸರ್ಕಾರಿ ನಿಯಮಗಳ ಪ್ರಕಾರ ಆರ್ಥಿಕ ನೆರವಿಗೆ ಅರ್ಹವಾಗಿವೆ ಎಂದು ಕಂಡುಬಂದಿದ್ದು, 77 ಪ್ರಕರಣಗಳಲ್ಲಿ ಮೊತ್ತವನ್ನು ವಿತರಿಸಲಾಗಿದೆ. ಒಟ್ಟು 62 ಅನರ್ಹರು ಎಂದು ಕಂಡುಬಂದಿದ್ದು, 86 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದೆ ಎಂದು ಪಾಟೀಲ್ ತಿಳಿಸಿದ್ದಾರೆ.</p>.ಆನ್ಲೈನ್ ಜೂಜಿನಲ್ಲಿ ವಂಚನೆ: ಯುವಕ ಆತ್ಮಹತ್ಯೆ.<p>‘ಏಪ್ರಿಲ್ನಲ್ಲಿ 229 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 74 ಮಂದಿ ಪರಿಹಾರಕ್ಕೆ ಅರ್ಹರು ಎಂದು ಕಂಡುಬಂದಿದೆ. ಈ 74 ಪ್ರಕರಣಗಳಲ್ಲಿ 33 ಪ್ರಕರಣಗಳ ಹಣವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.</p><p>2006 ಜನವರಿ 24ರ ಸರ್ಕಾರಿ ನಿರ್ಣಯದ (GR) ಪ್ರಕಾರ, ಬೆಳೆ ವೈಫಲ್ಯ, ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಿಂದ ಅಥವಾ ಪರವಾನಗಿ ಪಡೆದ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮರುಪಾವತಿಸಲು ಅಸಮರ್ಥತೆ, ಹೆಚ್ಚುತ್ತಿರುವ ಸಾಲ ಇತ್ಯಾದಿಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರನ್ನು ಆರ್ಥಿಕ ಸಹಾಯಕ್ಕೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಅಂತಹ ರೈತರ ಸಂಬಂಧಿಕರಿಗೆ ₹1 ಲಕ್ಷ ನೀಡಲಾಗುತ್ತದೆ. ಹಣಕಾಸಿನ ನೆರವಿನ ಹೆಚ್ಚಳವು ಪರಿಗಣನೆಯಲ್ಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.</p> .ತಾಯಿಯನ್ನು ಕೊಂದು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>