<p class="title"><strong>ಪೋರಬಂದರ್ (ಪಿಟಿಐ):</strong> ಗುಜರಾತ್ನ ಕರಾವಳಿಯಲ್ಲಿ ಭಾರತೀಯ ಮೀನುಗಾರರಿದ್ದ ದೋಣಿಯ ಮೇಲೆ ಗುಂಡು ಹಾರಿಸಿದ್ದ ಪ್ರಕರಣ ಸಂಬಂಧ ಪಾಕ್ನ ನೌಕಾನೆಲೆಯ 10 ಮಂದಿ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p class="title">ಇಲ್ಲಿನ ನವಿಬಂದರ್ ಠಾಣೆಯಲ್ಲಿ ಐಪಿಸಿ ಕಾಯ್ದೆಯನ್ವಯ ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆಯಡಿ ಪಾಕ್ನ 10 ಮಂದಿ ಅಪರಿಚಿತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p class="title">ಶನಿವಾರ ಸಂಜೆ 4 ಗಂಟೆಗೆ ಕೃತ್ಯ ನಡೆದಿತ್ತು. ಭಾರತೀಯರಿದ್ದ ದೋಣಿಯ ಜಲ್ಪರಿ ಮೇಲೆ ಪಾಕ್ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು, ಮೀನುಗಾರ, ಮಹಾರಾಷ್ಟ್ರದ ಶ್ರೀಧರ್ ರಮೇಶ್ ಚಮ್ರೆ (32) ಮೃತಪಟ್ಟಿದ್ದರೆ, ಡಿಯುವಿನ ದಿಲೀಪ್ ಸೋಳಂಕಿ ಎಂಬುವರು ಗಾಯಗೊಂಡಿದ್ದರು. ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು.</p>.<p class="title">ಭಾರತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪ್ರಚೋದಿತವಾಗಿ ಏಕಾಏಕಿ ಗುಂಡು ಹಾರಿಸಲಾಗಿದೆ. ಪಾಕ್ ಜೊತೆ ರಾಜತಾಂತ್ರಿಕ ಮಾರ್ಗದಲ್ಲೂ ಈ ವಿಷಯವನ್ನು ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.</p>.<p class="title"><strong>ಕೃತ್ಯ ಖಂಡಿಸಿ ಗ್ರಾಮದಲ್ಲಿ ಬಂದ್</strong></p>.<p class="title">ಪಾಲ್ಗಾರ್ (ಪಿಟಿಐ): ಪಾಕಿಸ್ತಾನದ ನೌಕಾನೆಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಮೀನುಗಾರ ಮೃತಪಟ್ಟಿದ್ದ ಘಟನೆ ಖಂಡಿಸಿ ಇಲ್ಲಿನ ವದ್ರಾಯಿ ಗ್ರಾಮದ ಜನರು ಸೋಮವಾರ ಬಂದ್ ಆಚರಿಸಿದರು.</p>.<p>ಗುಜರಾತ್ ಕರಾವಳಿಯಲ್ಲಿ ಶನಿವಾರ ಕೃತ್ಯ ನಡೆದಿದ್ದು, ಮೀನುಗಾರ ಶ್ರೀಧರ್ ರಮೇಶ್ ಚಮ್ರೆ ಇದೇ ಗ್ರಾಮದವರು. ಸ್ಥಳೀಯ ಪಂಚಾಯತ್ ಬಂದ್ಗೆ ಕರೆ ನೀಡಿದ್ದು ಅಂಗಡಿ, ವಹಿವಾಟು ಬಂದ್ ಆಗಿತ್ತು.</p>.<p>ಚಮ್ರೆ ಅವರಿಗೆ ತಂದೆ,ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ಶಾಂತಿಯುತವಾಗಿದೆ ಎಂದು ಸತ್ಪತಿ ಪೊಲೀಸ್ ಠಾಣೆಯ ಅಧಿಕಾರಿ ಸುಧೀರ್ ದಹೇರ್ಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಪೋರಬಂದರ್ (ಪಿಟಿಐ):</strong> ಗುಜರಾತ್ನ ಕರಾವಳಿಯಲ್ಲಿ ಭಾರತೀಯ ಮೀನುಗಾರರಿದ್ದ ದೋಣಿಯ ಮೇಲೆ ಗುಂಡು ಹಾರಿಸಿದ್ದ ಪ್ರಕರಣ ಸಂಬಂಧ ಪಾಕ್ನ ನೌಕಾನೆಲೆಯ 10 ಮಂದಿ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p class="title">ಇಲ್ಲಿನ ನವಿಬಂದರ್ ಠಾಣೆಯಲ್ಲಿ ಐಪಿಸಿ ಕಾಯ್ದೆಯನ್ವಯ ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆಯಡಿ ಪಾಕ್ನ 10 ಮಂದಿ ಅಪರಿಚಿತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p class="title">ಶನಿವಾರ ಸಂಜೆ 4 ಗಂಟೆಗೆ ಕೃತ್ಯ ನಡೆದಿತ್ತು. ಭಾರತೀಯರಿದ್ದ ದೋಣಿಯ ಜಲ್ಪರಿ ಮೇಲೆ ಪಾಕ್ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು, ಮೀನುಗಾರ, ಮಹಾರಾಷ್ಟ್ರದ ಶ್ರೀಧರ್ ರಮೇಶ್ ಚಮ್ರೆ (32) ಮೃತಪಟ್ಟಿದ್ದರೆ, ಡಿಯುವಿನ ದಿಲೀಪ್ ಸೋಳಂಕಿ ಎಂಬುವರು ಗಾಯಗೊಂಡಿದ್ದರು. ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು.</p>.<p class="title">ಭಾರತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪ್ರಚೋದಿತವಾಗಿ ಏಕಾಏಕಿ ಗುಂಡು ಹಾರಿಸಲಾಗಿದೆ. ಪಾಕ್ ಜೊತೆ ರಾಜತಾಂತ್ರಿಕ ಮಾರ್ಗದಲ್ಲೂ ಈ ವಿಷಯವನ್ನು ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.</p>.<p class="title"><strong>ಕೃತ್ಯ ಖಂಡಿಸಿ ಗ್ರಾಮದಲ್ಲಿ ಬಂದ್</strong></p>.<p class="title">ಪಾಲ್ಗಾರ್ (ಪಿಟಿಐ): ಪಾಕಿಸ್ತಾನದ ನೌಕಾನೆಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಮೀನುಗಾರ ಮೃತಪಟ್ಟಿದ್ದ ಘಟನೆ ಖಂಡಿಸಿ ಇಲ್ಲಿನ ವದ್ರಾಯಿ ಗ್ರಾಮದ ಜನರು ಸೋಮವಾರ ಬಂದ್ ಆಚರಿಸಿದರು.</p>.<p>ಗುಜರಾತ್ ಕರಾವಳಿಯಲ್ಲಿ ಶನಿವಾರ ಕೃತ್ಯ ನಡೆದಿದ್ದು, ಮೀನುಗಾರ ಶ್ರೀಧರ್ ರಮೇಶ್ ಚಮ್ರೆ ಇದೇ ಗ್ರಾಮದವರು. ಸ್ಥಳೀಯ ಪಂಚಾಯತ್ ಬಂದ್ಗೆ ಕರೆ ನೀಡಿದ್ದು ಅಂಗಡಿ, ವಹಿವಾಟು ಬಂದ್ ಆಗಿತ್ತು.</p>.<p>ಚಮ್ರೆ ಅವರಿಗೆ ತಂದೆ,ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ಶಾಂತಿಯುತವಾಗಿದೆ ಎಂದು ಸತ್ಪತಿ ಪೊಲೀಸ್ ಠಾಣೆಯ ಅಧಿಕಾರಿ ಸುಧೀರ್ ದಹೇರ್ಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>