ರಾಂಚಿ(ಜಾರ್ಖಂಡ್): ಮೇವು ಹಗರಣದ 35 ಮಂದಿ ಅಪರಾಧಿಗಳಿಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಶುಕ್ರವಾರ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹75 ಸಾವಿರದಿಂದ ₹ 1ಕೋಟಿ ವರೆಗೆ ದಂಡ ವಿಧಿಸಿದೆ.
ಡೊರಾಂಡಾ ಖಜಾನೆಯಿಂದ ₹36.59 ಕೋಟಿ ಹಿಂಪಡೆದು ವಂಚಿಸಿದ ಪ್ರಕರಣದ ಜೊತೆ ನಂಟು ಹೊಂದಿರುವ ಈ ಪ್ರಕರಣದಲ್ಲಿ ಇವರು ಅಪರಾಧಿಗಳೆಂದು ನ್ಯಾಯಾಲಯವು ಕಳೆದ ವಾರ ಘೋಷಿಸಿತ್ತು.
ಸಿಬಿಐ ನ್ಯಾಯಾಧೀಶರಾದ ವಿಶಾಲ್ ಶ್ರೀವಾಸ್ತವ್ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.