ಲಖನೌ: ಅಪಹರಣ ಪ್ರಕರಣದಲ್ಲಿ ಮಾಜಿ ಸಂಸದ ಧನಂಜಯ್ ಸಿಂಗ್ ಅವರಿಗೆ ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿರುವ ಸಂಸದ/ಶಾಸಕರ ನ್ಯಾಯಾಲಯವು ಏಳು ವರ್ಷ ಕಾರಾಗೃಹ ಶಿಕ್ಷೆ ಮತ್ತು ₹75,000 ದಂಡ ವಿಧಿಸಿ ಬುಧವಾರ ಆದೇಶ ಪ್ರಕಟಿಸಿದೆ.
ಆರೋಪವನ್ನು ಅಲ್ಲಗಳೆದಿರುವ ಸಿಂಗ್, ತಮ್ಮ ವಿರುದ್ಧದ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ಮೇ 2020ರಲ್ಲಿ ನಮಾಮಿ ಗಂಗಾ ಯೋಜನೆಯ ಮ್ಯಾನೇಜರ್ ಅಭಿನವ್ ಸಿಂಘಾಲ್ ಅವರನ್ನು ಅಪಹರಣ ಮಾಡಿದ ಮತ್ತು ಅವರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಧನಂಜಯ್ ವಿರುದ್ಧ ಇನ್ನೂ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.