ಲಖನೌ: ಉತ್ತರ ಪ್ರದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಈ ಹಿಂದೆ ಕೇಸರಿ ಬಣ್ಣ ಬಳಿದಿದ್ದ ಕೇಸರಿಪ್ರಿಯರು, ಈಗ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನೂ ಬಿಟ್ಟಿಲ್ಲ. ಶಹಜಹಾನ್ಪುರ ಜಿಲ್ಲೆಯಲ್ಲಿನ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಗಾಂಧೀಜಿ ಪ್ರತಿಮೆಗೆ ಕೇಸರಿಬಣ್ಣ ಬಳಿಯಲಾಗಿದೆ.
ಈ ಕುರಿತು ಉತ್ತರ ಪ್ರದೇಶದ ಮಾಧ್ಯಮಗಳು ವರದಿ ಮಾಡಿವೆ.
ಢಾಕಾ ಘನಶ್ಯಾಂಪುರ ಗ್ರಾಮದಲ್ಲಿನ ಪ್ರತಿಮೆಗೆ ಕೇಸರಿ ಬಣ್ಣ ಬಳಿದಿರುವುದನ್ನು ಸ್ಥಳೀಯರು ಪಂಚಾಯ್ತಿಯ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
‘ಬಿಜೆಪಿಗೂ, ಈ ಪ್ರಕರಣಕ್ಕೂ ಸಂಬಂಧವಿಲ್ಲ. ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯುವ ಮನಸ್ಥಿತಿ ನಮ್ಮದಲ್ಲ. ಸ್ಥಳೀಯರೇ ಈ ಬಣ್ಣ ಬಳಿದು, ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಬಿಜೆಪಿ ಪ್ರಾದೇಶಿಕ ಘಟಕದ ಅಧ್ಯಕ್ಷ ರಾಕೇಶ ಅನಾವ ಪ್ರತಿಕ್ರಿಯಿಸಿದ್ದಾರೆ.