ಏಪ್ರಿಲ್ 24ರಂದು ಬೇಗುಸರಾಯ್ನಲ್ಲಿ ಮಾತನಾಡಿದ್ದ ಗಿರಿರಾಜ್ ಸಿಂಗ್, ‘ಯಾರು ವಂದೇ ಮಾತರಂ ಹೇಳುವುದಿಲ್ಲವೋ ಅಥವಾ ತಾಯ್ನಾಡಿಗೆ ಗೌರವ ನೀಡುವುದಿಲ್ಲವೋ ಅವರನ್ನು ದೇಶ ಕ್ಷಮಿಸುವುದಿಲ್ಲ. ನನ್ನ ಪೂರ್ವಜರು ಮೃತಪಟ್ಟಾಗ ಅವರ ಸಮಾಧಿಗೆ ಸ್ಥಳದ ಅಭಾವ ಇರಲಿಲ್ಲ. ಆದರೆ ನಿಮಗೆ ಮೂರಡಿ ಜಾಗವಾದರೂ ಬೇಡವೇ‘ ಎಂದು ಮತದಾರರನ್ನು ಉದ್ದೇಶಿಸಿ ಹೇಳಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂಈ ವೇಳೆ ಉಪಸ್ಥಿತರಿದ್ದರು.