<p><strong>ರಜೌರಿ</strong>: ‘ಸೇನೆಯು ಜಮ್ಮು– ಕಾಶ್ಮೀರದಲ್ಲಿ ಬೇರೂರಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ ಎಂಬ ನಂಬಿಕೆಯಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದರು.</p><p>ಸೇನಾ ವಾಹನಗಳ ಮೇಲೆ ಉಗ್ರರ ಹಠಾತ್ ದಾಳಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜನಾಥ್ ಸಿಂಗ್ ಜಮ್ಮು–ಕಾಶ್ಮೀರಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ.</p><p>ಈ ವೇಳೆ ಸೇನೆಯ ಶೌರ್ಯ ಸಾಹಸಗಳನ್ನು ಶ್ಲಾಘಿಸಿದ ಅವರು, ‘ಜಮ್ಮು–ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ಮುಕ್ತಾಯ ಹಾಡಬೇಕಿದೆ. ಈ ನಿಟ್ಟಿನಲ್ಲಿಯೇ ಸೇನೆಯು ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ನೀವು ಗೆಲುವು ಸಾಧಿಸುತ್ತೀರಿ ಎಂಬ ನಂಬಿಕೆ ನನಗಿದೆ’ ಎಂದರು.</p><p><strong>ಸತ್ತವರನ್ನು ಮರಳಿ ತರುತ್ತಾರೆಯೇ?: ಫಾರೂಕ್ ಅಬ್ದುಲ್ಲಾ</strong></p><p>ಜಮ್ಮು–ಕಾಶ್ಮೀರಕ್ಕೆ ರಕ್ಷಣಾ ಸಚಿವರು ಭೇಟಿ ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ‘ರಕ್ಷಣಾ ಸಚಿವರ ಭೇಟಿಯಿಂದ ನನಗೆ ಯಾವ ನಿರೀಕ್ಷೆಗಳಿಲ್ಲ. ಸತ್ತ ಮೂವರು ನಾಗರಿಕರನ್ನು ಅವರು(ರಾಜನಾಥ್) ಮರಳಿ ತರುತ್ತಾರೆಯೇ? ಆ ಶಕ್ತಿ ಅವರಿಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.</p><p>‘ನಾಗರಿಕರ ಹತ್ಯೆಯಂತಹ ಘಟನೆಗಳು ಮರುಕಳಿಸುವುದಿಲ್ಲ ಎಂಬ ನಂಬಿಕೆಯಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಜೌರಿ</strong>: ‘ಸೇನೆಯು ಜಮ್ಮು– ಕಾಶ್ಮೀರದಲ್ಲಿ ಬೇರೂರಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ ಎಂಬ ನಂಬಿಕೆಯಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದರು.</p><p>ಸೇನಾ ವಾಹನಗಳ ಮೇಲೆ ಉಗ್ರರ ಹಠಾತ್ ದಾಳಿಗೆ ನಾಲ್ವರು ಯೋಧರು ಹುತಾತ್ಮರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜನಾಥ್ ಸಿಂಗ್ ಜಮ್ಮು–ಕಾಶ್ಮೀರಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ.</p><p>ಈ ವೇಳೆ ಸೇನೆಯ ಶೌರ್ಯ ಸಾಹಸಗಳನ್ನು ಶ್ಲಾಘಿಸಿದ ಅವರು, ‘ಜಮ್ಮು–ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳಿಗೆ ಮುಕ್ತಾಯ ಹಾಡಬೇಕಿದೆ. ಈ ನಿಟ್ಟಿನಲ್ಲಿಯೇ ಸೇನೆಯು ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ನೀವು ಗೆಲುವು ಸಾಧಿಸುತ್ತೀರಿ ಎಂಬ ನಂಬಿಕೆ ನನಗಿದೆ’ ಎಂದರು.</p><p><strong>ಸತ್ತವರನ್ನು ಮರಳಿ ತರುತ್ತಾರೆಯೇ?: ಫಾರೂಕ್ ಅಬ್ದುಲ್ಲಾ</strong></p><p>ಜಮ್ಮು–ಕಾಶ್ಮೀರಕ್ಕೆ ರಕ್ಷಣಾ ಸಚಿವರು ಭೇಟಿ ನೀಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ‘ರಕ್ಷಣಾ ಸಚಿವರ ಭೇಟಿಯಿಂದ ನನಗೆ ಯಾವ ನಿರೀಕ್ಷೆಗಳಿಲ್ಲ. ಸತ್ತ ಮೂವರು ನಾಗರಿಕರನ್ನು ಅವರು(ರಾಜನಾಥ್) ಮರಳಿ ತರುತ್ತಾರೆಯೇ? ಆ ಶಕ್ತಿ ಅವರಿಗಿದೆಯೇ?’ ಎಂದು ಪ್ರಶ್ನಿಸಿದ್ದಾರೆ.</p><p>‘ನಾಗರಿಕರ ಹತ್ಯೆಯಂತಹ ಘಟನೆಗಳು ಮರುಕಳಿಸುವುದಿಲ್ಲ ಎಂಬ ನಂಬಿಕೆಯಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>