ರಾಣೆ ಅವರ ಕುಟುಂಬ ನಡೆಸುತ್ತಿರುವ ಕಂಪನಿ ಅನಧಿಕೃತ ನಿರ್ಮಾಣವನ್ನು ಕ್ರಮಬದ್ಧಗೊಳಿಸುವಂತೆ ಕೋರಿ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಪರಿಗಣಿಸಲು, ಅದಕ್ಕೆ ಅನುಮತಿ ನೀಡಲು ಬಿಎಂಸಿಗೆ ಸಾಧ್ಯವಿಲ್ಲ. ಏಕೆಂದರೆ ಅದು ಅನಧಿಕೃತ ನಿರ್ಮಾಣವನ್ನು ಪ್ರೋತ್ಸಾಹಿಸುತ್ತದೆ ಎಂದು ನ್ಯಾಯಮೂರ್ತಿ ಆರ್. ಡಿ ಧನುಕಾ ಮತ್ತು ಕಮಲ್ ಖಾತ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತು.