ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಶಿವಸೇನೆ, ಸಿಧುರನ್ನು ‘ದೇಶದ್ರೋಹಿ’ ಎಂದು ಕರೆದ ಬಿಜೆಪಿಯನ್ನೂ ಟೀಕಿಸಿದೆ. ‘ಯಾರಿಗೇ ಆಗಲಿ, ಕೆಲವರು ಸುಲಭವಾಗಿ ‘ದೇಶದ್ರೋಹಿ’ ಪಟ್ಟ ಕಟ್ಟಿಬಿಡುತ್ತಾರೆ. ನೋಟು ರದ್ದು ಕ್ರಮವನ್ನು ವಿರೋಧಿಸಿದವರು, ಮೋದಿಯನ್ನು ಟೀಕಿಸಿದವರೂ ‘ದೇಶದ್ರೋಹಿ’ಗಳಾಗಿ ಬಿಡುತ್ತಾರೆ’ಎಂದು ಅದು ಟೀಕಿಸಿದೆ.