<p><strong>ಜೈಪುರ (ಪಿಟಿಐ):</strong> ರಾಜಸ್ಥಾನದ ಪ್ರತಾಪಗಢದಲ್ಲಿ ಅಂತರರಾಜ್ಯಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಆರೋಪದಡಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.</p>.<p>ಮಧ್ಯಪ್ರದೇಶದ ನಗ್ದ ಮೂಲದ ಸಲ್ಮಾನ್ ಖಾನ್ (38) ಮತ್ತು ಝಾಲಾವರ್ನ ಶಸ್ತ್ರಾಸ್ತ್ರ ಪೂರೈಕೆದಾರ ರಾಕೇಶ್ ಕುಮಾರ್ ಬಂಧಿತ ಆರೋಪಿಗಳು.</p>.<p class="title">ಗ್ಯಾಂಗ್ಸ್ಟರ್ ನಿಗ್ರಹ ಕಾರ್ಯ ಪಡೆ (ಎಜಿಟಿಎಫ್ ) ಮತ್ತು ಪ್ರತಾಪಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, 14 ಅಕ್ರಮ ಬಂದೂಕುಗಳು, 1,860 ಸಜೀವ ಗುಂಡುಗಳು ಮತ್ತು ಛೋಟಾ ಸದ್ರಿ ಪ್ರದೇಶದಿಂದ 10 ಮ್ಯಾಗಝೀನ್ಗಳನ್ನು ವಶಕ್ಕೆ ಪಡೆದುಕೊಂಡಿದೆ.</p>.<p class="title">‘ಡಿಐಜಿ ಯೋಗೇಶ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. ಬನ್ಸ್ವಾರ, ಪ್ರತಾಪಗಢ ಮತ್ತು ಚಿತ್ತೋರ್ಗಢದಲ್ಲಿ ಪೊಲೀಸ್ ತಂಡಗಳು ವ್ಯಾಪಕ ಬೇಹುಗಾರಿಕೆ ನಡೆಸಿ, ಕಾರ್ಯಾಚರಣೆ ಮಾಡಲಾಯಿತು’ ಎಂದು ಎಜಿಟಿಎಫ್ನ ಹೆಚ್ಚುವರಿ ನಿರ್ದೇಶಕ ದಿನೇಶ್ ಎಂ.ಎನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ (ಪಿಟಿಐ):</strong> ರಾಜಸ್ಥಾನದ ಪ್ರತಾಪಗಢದಲ್ಲಿ ಅಂತರರಾಜ್ಯಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಆರೋಪದಡಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.</p>.<p>ಮಧ್ಯಪ್ರದೇಶದ ನಗ್ದ ಮೂಲದ ಸಲ್ಮಾನ್ ಖಾನ್ (38) ಮತ್ತು ಝಾಲಾವರ್ನ ಶಸ್ತ್ರಾಸ್ತ್ರ ಪೂರೈಕೆದಾರ ರಾಕೇಶ್ ಕುಮಾರ್ ಬಂಧಿತ ಆರೋಪಿಗಳು.</p>.<p class="title">ಗ್ಯಾಂಗ್ಸ್ಟರ್ ನಿಗ್ರಹ ಕಾರ್ಯ ಪಡೆ (ಎಜಿಟಿಎಫ್ ) ಮತ್ತು ಪ್ರತಾಪಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, 14 ಅಕ್ರಮ ಬಂದೂಕುಗಳು, 1,860 ಸಜೀವ ಗುಂಡುಗಳು ಮತ್ತು ಛೋಟಾ ಸದ್ರಿ ಪ್ರದೇಶದಿಂದ 10 ಮ್ಯಾಗಝೀನ್ಗಳನ್ನು ವಶಕ್ಕೆ ಪಡೆದುಕೊಂಡಿದೆ.</p>.<p class="title">‘ಡಿಐಜಿ ಯೋಗೇಶ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. ಬನ್ಸ್ವಾರ, ಪ್ರತಾಪಗಢ ಮತ್ತು ಚಿತ್ತೋರ್ಗಢದಲ್ಲಿ ಪೊಲೀಸ್ ತಂಡಗಳು ವ್ಯಾಪಕ ಬೇಹುಗಾರಿಕೆ ನಡೆಸಿ, ಕಾರ್ಯಾಚರಣೆ ಮಾಡಲಾಯಿತು’ ಎಂದು ಎಜಿಟಿಎಫ್ನ ಹೆಚ್ಚುವರಿ ನಿರ್ದೇಶಕ ದಿನೇಶ್ ಎಂ.ಎನ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>