ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್ಗೆ ಹಾಜರಾಗಲು ತ್ಯಾಗಿ ಅವರಿಗೆ ಸೂಚಿಸಲಾಗಿತ್ತು. ವಿಡಿಯೊ ಸಂದೇಶವೊಂದನ್ನು ಬುಧವಾರ ಹರಿಬಿಟ್ಟಿರುವ ಅವರು, ತಾವು ಜೈಲಿನಲ್ಲಿದ್ದಾಗ ಹರಿದ್ವಾರದ ಜ್ವಾಲಾಪುರದ ಕೆಲವು ದುಷ್ಕರ್ಮಿಗಳು ತಮ್ಮನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದರೆ ಜೈಲಿನ ನಿಯಮಗಳು ಬಿಗಿಯಾಗಿದ್ದರಿಂದ ಅವರ ಯೋಜನೆಯನ್ನು ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.