ನವದೆಹಲಿ: ಸಾಂಸ್ಕೃತಿಕ ಜೀವಂತಿಕೆ ಹಾಗೂ ಪೃಕೃತಿಯೊಂದಿಗಿನ ಸಾಮರಸ್ಯದೊಂದಿಗೆ ಭಾರತವು ಸುಸ್ಥಿರ ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅರ್ಥ್ ಡೇ (ಭೂಮಿ ದಿನ) ಪ್ರಯುಕ್ತ ಅವರು ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡಿದ್ದಾರೆ.
ನಮ್ಮ ಭೂಮಿಯನ್ನು ಸುಂದರ ಭೂಮಿಯನ್ನಾಗಿ ಮಾಡಲು ನಾನು ಎಲ್ಲರಿಗೂ ಕರೆ ಕೊಡುತ್ತೇನೆ. ಸುಸ್ಥಿರ ಅಭಿವೃದ್ಧಿ ಮೂಲಕ ನಾವು ಭೂಮಿಯನ್ನು ಉಳಿಸಿಕೊಳ್ಳಲು ಕಂಕಣಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಏಪ್ರಿಲ್ 22 ಅನ್ನು ಪ್ರತಿ ವರ್ಷ ಜಾಗತಿಕವಾಗಿ ಭೂಮಿಯ ಸಂರಕ್ಷಣೆಯ ಜಾಗೃತಿ ಬಗ್ಗೆ ಅರ್ಥ್ ಡೇ ಎಂದು ಆಚರಿಸಲಾಗುತ್ತದೆ.