ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಜ್‌ನಿಂದ 125 ಮಂದಿ ರಕ್ಷಣೆ: ಮುಂಬೈಗೆ ಕರೆತಂದ ’ಐಎನ್‌ಎಸ್‌ ಕೊಚ್ಚಿ’

Last Updated 19 ಮೇ 2021, 8:13 IST
ಅಕ್ಷರ ಗಾತ್ರ

ಮುಂಬೈ: ‘ತೌತೆ’ ಚಂಡಮಾರುತದ ಅಬ್ಬರದಿಂದ ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ‘ಪಿ305’ ಬಾರ್ಜ್‌ನಿಂದ 125 ಮಂದಿಯನ್ನು ರಕ್ಷಿಸಲಾಗಿದ್ದು, ಅವರನ್ನು ಐಎನ್‌ಎಸ್‌ ಕೊಚ್ಚಿ ಯುದ್ಧನೌಕೆಯ ಮೂಲಕ ಬುಧವಾರ ಮುಂಬೈಗೆ ಕರೆತರಲಾಗಿದೆ.

ಭಾರತೀಯ ನೌಕಾಪಡೆಯು ಬಾರ್ಜ್‌ನಲ್ಲಿ ಸಿಲುಕಿದ್ದ 273 ಮಂದಿಯ ಪೈಕಿ 184 ಜನರನ್ನು ರಕ್ಷಿಸಿದೆ.

‘ನೌಕೆಯು ಈವರೆಗೆ 184 ಜನರ ಪೈಕಿ 125 ಮಂದಿಯನ್ನು ‘ಪಿ205’ ಬಾರ್ಜ್‌ನಿಂದ ರಕ್ಷಿಸಿದೆ. ಈಗಲೂ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಗಾಳಿಯು 90–100 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಅಲೆಗಳ ಎತ್ತರವು 9–10 ಮೀಟರ್‌ ಇದೆ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆಯು ತುಂಬಾ ಕಠಿಣವಾಗಿದೆ’ ಎಂದು ಐಎನ್‌ಎಸ್ ಕೊಚ್ಚಿಯ ಕ್ಯಾಪ್ಟನ್‌ ಸಚಿನ್‌ ಸಿಕ್ವೇರಾ ಅವರು ವರದಿಗಾರರಿಗೆ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT