ವಿಚಾರಣೆಗೆ ನೀರವ್ ಮೋದಿ ಹಾಜರಾಗದಿರುವುದಕ್ಕೆ ನ್ಯಾಯಾಧೀಶ ಬಿ.ಎಚ್.ಕಪಾಡಿಯಾ ಆದೇಶ ಹೊರಡಿಸಿದ್ದಾರೆ. ₹52 ಕೋಟಿ ಕಸ್ಟಮ್ಸ್ ಡ್ಯೂಟಿ ವಂಚಿಸಿದ ಕಾರಣಕ್ಕೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ನೀರವ್ ವಿರುದ್ಧ ಮಾರ್ಚ್ನಲ್ಲಿ ಪ್ರಕರಣ ದಾಖಲಿಸಿತ್ತು. ಉತ್ಕೃಷ್ಟ ದರ್ಜೆಯ ವಜ್ರ ಮತ್ತು ಹರಳು ಆಮದು ಮಾಡಿಕೊಂಡು, ದಾಖಲೆಯಲ್ಲಿ ಕಡಿಮೆ ದರ್ಜೆಯದ್ದೆಂದು ತೋರಿಸಿದ ಆರೋಪ ಎದುರಿಸುತ್ತಿದ್ದಾರೆ.