<p><strong>ಅಮರಾವತಿ</strong>: ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. </p><p>ನಂದ್ಯಾಲ್ ಜಿಲ್ಲೆಯ ನಲ್ಲಮಲ ಅರಣ್ಯ ವ್ಯಾಪ್ತಿಯ ಕಾಶಿನಯನ ಕ್ಷೇತ್ರವನ್ನು ಇತ್ತೀಚೆಗೆ ಧ್ವಂಸಗೊಳಿಸಲಾಗಿದೆ. ಹಿಂದೂ ಧರ್ಮವು ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಅಧಿಕಾರಾವಧಿಯಲ್ಲಿ, ದೇವಾಲಯದ ಭೂಮಿಯನ್ನು ರಕ್ಷಿಸಿದ್ದೇವೆ. ಆದರೆ ಈ ಸರ್ಕಾರದ ಆಳ್ವಿಕೆಯ ಕೆಲವೇ ತಿಂಗಳುಗಳಲ್ಲಿ, ಅವರ ಕಣ್ಗಾವಲಿನಲ್ಲಿ ಒಂದು ಪವಿತ್ರ ದೇವಾಲಯವನ್ನು ಕೆಡವಲಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.ನಟ, ನಿರ್ದೇಶಕ ಅಪ್ಗ್ರೇಡ್ ಆಗಬೇಕು: ನಟ ಯಶ್ ಕಿವಿಮಾತು.ಸಂಕ್ರಾಂತಿಗೆ ಕೆವಿಎನ್ ದಳಪತಿ ‘ಜನ ನಾಯಗನ್’ . <p>ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಕಾಶಿನಯನ ಕ್ಷೇತ್ರವನ್ನು ಇತ್ತೀಚೆಗೆ ನೆಲಸಮ ಮಾಡಲಾಯಿತು ಎಂದು ವರದಿಯಾಗಿದೆ.</p><p>2023ರ ಆಗಸ್ಟ್ 7ರಂದು ಅರಣ್ಯ ವ್ಯಾಪ್ತಿಯಲ್ಲಿ ಕಾಶಿನಯನ ಕ್ಷೇತ್ರದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಆದೇಶಿಸಿದರೂ ವೈಎಸ್ಆರ್ಸಿಪಿ ಸರ್ಕಾರ ಮಧ್ಯಪ್ರವೇಶಿಸಿ 12.98 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ವಿನಾಯಿತಿ ಕೋರಿತ್ತು ಎಂದು ಜಗನ್ ತಿಳಿಸಿದ್ದಾರೆ.</p><p>ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಆದೇಶದ ಮೇರೆಗೆ ದೇವಾಲಯವನ್ನು ಕೆಡವಲಾಗಿದೆ. ಇದು ಹಿಂದೂ ಧರ್ಮದ ಮೇಲಿನ ಅನಾಗರಿಕ ದಾಳಿ ಎಂದು ಜಗನ್ ಟೀಕಿಸಿದ್ದಾರೆ.</p><p>ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ತಿರುಮಲ ಲಡ್ಡು ವಿವಾದ ಮತ್ತು ಕಾಲ್ತುಳಿತವು ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡುವಲ್ಲಿ ವೈಫಲ್ಯ ಪ್ರದರ್ಶಿಸಿರುವುದನ್ನು ಉಲ್ಲೇಖಿಸಿದ ಜಗನ್ ಬೂಟಾಟಿಕೆ ಸರ್ಕಾರ ಎಂದು ಹೇಳಿದ್ದಾರೆ.</p>.ಸಂಪಾದಕೀಯ | ಬಿಜೆಪಿ ಒಳಜಗಳ: ಕೊನೆಗೂ ಕ್ರಮಕ್ಕೆ ಮುಂದಾದ ವರಿಷ್ಠರು.ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ.ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ.ಸೂರ್ಯ-ನಮಸ್ಕಾರ | ಅಮೆರಿಕದ ಚುನಾವಣೆ: ಗೋಜಲಿನ ಸಂತೆ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. </p><p>ನಂದ್ಯಾಲ್ ಜಿಲ್ಲೆಯ ನಲ್ಲಮಲ ಅರಣ್ಯ ವ್ಯಾಪ್ತಿಯ ಕಾಶಿನಯನ ಕ್ಷೇತ್ರವನ್ನು ಇತ್ತೀಚೆಗೆ ಧ್ವಂಸಗೊಳಿಸಲಾಗಿದೆ. ಹಿಂದೂ ಧರ್ಮವು ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಅಧಿಕಾರಾವಧಿಯಲ್ಲಿ, ದೇವಾಲಯದ ಭೂಮಿಯನ್ನು ರಕ್ಷಿಸಿದ್ದೇವೆ. ಆದರೆ ಈ ಸರ್ಕಾರದ ಆಳ್ವಿಕೆಯ ಕೆಲವೇ ತಿಂಗಳುಗಳಲ್ಲಿ, ಅವರ ಕಣ್ಗಾವಲಿನಲ್ಲಿ ಒಂದು ಪವಿತ್ರ ದೇವಾಲಯವನ್ನು ಕೆಡವಲಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.ನಟ, ನಿರ್ದೇಶಕ ಅಪ್ಗ್ರೇಡ್ ಆಗಬೇಕು: ನಟ ಯಶ್ ಕಿವಿಮಾತು.ಸಂಕ್ರಾಂತಿಗೆ ಕೆವಿಎನ್ ದಳಪತಿ ‘ಜನ ನಾಯಗನ್’ . <p>ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಕಾಶಿನಯನ ಕ್ಷೇತ್ರವನ್ನು ಇತ್ತೀಚೆಗೆ ನೆಲಸಮ ಮಾಡಲಾಯಿತು ಎಂದು ವರದಿಯಾಗಿದೆ.</p><p>2023ರ ಆಗಸ್ಟ್ 7ರಂದು ಅರಣ್ಯ ವ್ಯಾಪ್ತಿಯಲ್ಲಿ ಕಾಶಿನಯನ ಕ್ಷೇತ್ರದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಆದೇಶಿಸಿದರೂ ವೈಎಸ್ಆರ್ಸಿಪಿ ಸರ್ಕಾರ ಮಧ್ಯಪ್ರವೇಶಿಸಿ 12.98 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ವಿನಾಯಿತಿ ಕೋರಿತ್ತು ಎಂದು ಜಗನ್ ತಿಳಿಸಿದ್ದಾರೆ.</p><p>ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಆದೇಶದ ಮೇರೆಗೆ ದೇವಾಲಯವನ್ನು ಕೆಡವಲಾಗಿದೆ. ಇದು ಹಿಂದೂ ಧರ್ಮದ ಮೇಲಿನ ಅನಾಗರಿಕ ದಾಳಿ ಎಂದು ಜಗನ್ ಟೀಕಿಸಿದ್ದಾರೆ.</p><p>ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ತಿರುಮಲ ಲಡ್ಡು ವಿವಾದ ಮತ್ತು ಕಾಲ್ತುಳಿತವು ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡುವಲ್ಲಿ ವೈಫಲ್ಯ ಪ್ರದರ್ಶಿಸಿರುವುದನ್ನು ಉಲ್ಲೇಖಿಸಿದ ಜಗನ್ ಬೂಟಾಟಿಕೆ ಸರ್ಕಾರ ಎಂದು ಹೇಳಿದ್ದಾರೆ.</p>.ಸಂಪಾದಕೀಯ | ಬಿಜೆಪಿ ಒಳಜಗಳ: ಕೊನೆಗೂ ಕ್ರಮಕ್ಕೆ ಮುಂದಾದ ವರಿಷ್ಠರು.ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ.ಸಂಗತ | ಸಂಭ್ರಮದ ಜೊತೆಗಿರಲಿ ಸಂವೇದನೆ.ಸೂರ್ಯ-ನಮಸ್ಕಾರ | ಅಮೆರಿಕದ ಚುನಾವಣೆ: ಗೋಜಲಿನ ಸಂತೆ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>