ಸಿ.ಕೆ.ನಾಣು ಅವರು ಕೇರಳದ ಪ್ರಭಾವಿ ನಾಯಕರಾಗಿದ್ದಾರೆ. ಕೇರಳದ ಜೆಡಿಎಸ್ ಘಟಕವು ಎಲ್ಡಿಎಫ್ ಮೈತ್ರಿಕೂಟದಲ್ಲಿದ್ದು, ಪಿಣರಾಯಿ ವಿಜಯನ್ ಸರ್ಕಾರದ ಪಾಲುದಾರ ಪಕ್ಷವೂ ಹೌದು. ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಹೊಂದಿದೆ. ಚಿತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ. ಕೃಷ್ಣಮೂರ್ತಿ ಅವರು ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾರೆ.