ನವದೆಹಲಿ: ವಿದೇಶ ಪ್ರಯಾಣಕ್ಕೆ ಜಾರಿ ನಿರ್ದೇಶನಾಲಯ (ಇಡಿ) ತಡೆ ಒಡ್ಡಿರುವುದನ್ನು ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯೂಬ್ ಗುರುವಾರ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆನ್ಲೈನ್ ಮೂಲಕ ಸಂಗ್ರಹಿಸಿದ ಚಾರಿಟಿಯ ದೇಣಿಗೆ ಮೊತ್ತವನ್ನು ದುರುಪಯೋಗಪಡಿಸಿಕೊಂಡ ಆರೋಪ ರಾಣಾ ಅಯೂಬ್ ಮೇಲಿದೆ.
ಕೆಟ್ಟೋ.ಕಾಂ ಮೂಲಕ ಸಂಗ್ರಹವಾದ ₹1.77 ಕೋಟಿ ಮೊತ್ತವನ್ನು ರಾಣಾ ಅವರು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಇಡಿ ಅಧಿಕಾರಿಗಳು, ಲಂಡನ್ಗೆ ತೆರಳಲು ಸಿದ್ಧವಾಗಿದ್ದ ರಾಣಾ ಅವರನ್ನು ತಡೆದಿದ್ದರು.
ಇದನ್ನು ಪ್ರಶ್ನಿಸಿ, ರಾಣಾ ಪರ ವಕೀಲರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.
ಲಂಡನ್ನಲ್ಲಿ ಪತ್ರಿಕೋದ್ಯಮ ಉತ್ಸವಕ್ಕೆ ತೆರಳಲು ರಾಣಾ ಮುಂದಾಗಿದ್ದು, ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗ ಅವರಿಗೆ ಅಧಿಕಾರಿಗಳು ತಡೆ ಒಡ್ಡಿದ್ದರು.
I was stopped today at Mumbai immigration from travelling to deliver this address & onwards to @journalismfest to deliver d keynote speech on Indian democracy. I had made this announcement public over weeks, yet the ED summon very curiously arrived in my inbox after i was stopped https://t.co/BGNm8pcjlD