ಬರೇಲಿ: ಉತ್ತರ ಪ್ರದೇಶದ ವಾರಾಣಸಿಯ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಸಮೀಕ್ಷೆ ನಡೆಸಲು 2022ರಲ್ಲಿ ಅನುಮತಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ (ತ್ವರಿತ ಗತಿ ನ್ಯಾಯಾಲಯ– 1) ರವಿ ಕುಮಾರ್ ದಿವಾಕರ್ ಅವರು ತಮಗೆ ಅಪರಿಚಿತ ವಿದೇಶ ಸಂಖ್ಯೆಗಳಿಂದ ಕರೆ ಬರುತ್ತಿವೆ ಎಂದು ದೂರಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
‘ನ್ಯಾಯಾಧೀಶ ದಿವಾಕರ್ ಅವರು ಪತ್ರ ಬರೆದಿದ್ದಾರೆ. ಅಂತರರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಬರುತ್ತಿರುವುದು ತಮ್ಮನ್ನು ಆತಂಕಕ್ಕೆ ದೂಡಿದೆ ಎಂದು ಅವರು ಬರೆದಿದ್ದಾರೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಘುಲೆ ಸುಶೀಲ್ ಚಂದ್ರಭಾನ್ ಅವರು ಹೇಳಿದ್ದಾರೆ.