‘ನಾನು ಗೋಮಾಂಸ ಸೇವಿಸುವುದಿಲ್ಲ’
ತಾನು ಗೋಮಾಂಸ ತಿನ್ನುತ್ತೇನೆ ಎನ್ನುವ ಆರೋಪದ ಬಗ್ಗೆ ‘ಎಕ್ಸ್’ ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ ರನೌತ್ ‘ನನ್ನ ಬಗ್ಗೆ ಆಧಾರರಹಿತ ಗಾಳಿಸುದ್ದಿಗಳನ್ನು ಹರಡುತ್ತಿರುವುದು ನಾಚಿಕೆಗೇಡು. ಜನರಿಗೆ ನನ್ನ ಬಗ್ಗೆ ಗೊತ್ತಿದೆ. ನಾನು ಹೆಮ್ಮೆಯ ಹಿಂದು ಎನ್ನುವುದನ್ನು ಅರಿತಿರುವ ಅವರನ್ನು ಯಾವುದೇ ಕಾರಣಕ್ಕೂ ದಾರಿ ತಪ್ಪಿಸಲಾಗದು. ನಾನು ಗೋಮಾಂಸವನ್ನಾಗಲಿ ಯಾವುದೇ ರೀತಿಯ ರೆಡ್ ಮೀಟ್ ಸೇವಿಸುವುದಿಲ್ಲ’ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಕ್ರಮಾದಿತ್ಯ ಸಿಂಗ್ ‘ನಾನು ಕಂಗನಾಗೆ ಬುದ್ಧಿ ಕೊಡುವಂತೆ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯದ ಜನರ ಬಗ್ಗೆ ಏನೂ ಗೊತ್ತಿಲ್ಲದ ಕಂಗನಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲವಾದ್ದರಿಂದ ‘ದೇವಭೂಮಿ’ಯಾದ ಹಿಮಾಚಲದಿಂದ ಅವರು ಬಾಲಿವುಡ್ಗೆ ಪರಿಶುದ್ಧರಾಗಿ ಹಿಂದಿರುಗಲಿ ಎಂಬುದಾಗಿ ಹಾರೈಸುತ್ತೇನೆ’ ಎಂದು ಹೇಳಿದರು.