<p><strong>ಶ್ರೀನಗರ:</strong> ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಬಹುತೇಕ ನಿರ್ನಾಮವಾಗಿದೆ. ಕಳೆದ ಮೂರು ದಶಕಗಳಿಂದ ಸಂಘರ್ಷ ಪೀಡಿತವಾಗಿರುವ ಈ ಪ್ರದೇಶದಲ್ಲಿ ಇಂತಹ ಪರಿವರ್ತನೆ ಕಂಡುಬಂದಿರುವುದು ಗಮನಾರ್ಹ.</p>.<p>2017ರಲ್ಲಿ 126 ಕಾಶ್ಮೀರಿ ಯುವಕರನ್ನು ಉಗ್ರ ಸಂಘಟನೆಯ ವಿವಿಧ ಶ್ರೇಣಿಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ನಂತರದ ವರ್ಷ, ಈ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂತು. 2018ರಲ್ಲಿ 200 ಯುವಕರು ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ್ದರು. ಈ ವರ್ಷ ಕೇವಲ ಒಬ್ಬ ಯುವಕ ಉಗ್ರ ಸಂಘಟನೆಗೆ ಸೇರಿದ್ದಾಗಿ ಅಂಕಿ–ಅಂಶಗಳು ಹೇಳುತ್ತವೆ.</p>.<p>ಗಡಿಗೆ ಬೇಲಿ ಹಾಕುವ ಮೂಲಕ ಗಡಿಯಾಚೆಯಿಂದ ನುಸುಳುವಿಕೆಗೆ ಕಡಿವಾಣ ಹಾಕಲಾಗಿದೆ. ಡ್ರೋನ್ಗಳ ನಿಯೋಜನೆಯಿಂದ ಕಣ್ಗಾವಲು ಹೆಚ್ಚಿಸಲಾಗಿದೆ. ಇದರಿಂದ, ದೇಶದೊಳಗೆ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುವುದನ್ನು ಕೂಡ ತಡೆಗಟ್ಟಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.</p>.<p>‘ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಬಹುತೇಕ ಸ್ಥಗಿತಗೊಂಡಿರುವುದು ತಂತ್ರಗಾರಿಕೆ ದೃಷ್ಟಿಯಿಂದ ಭದ್ರತಾ ಪಡೆಗಳಿಗೆ ಸಂದ ಗೆಲುವು. ಇದು, ಜಮ್ಮು–ಕಾಶ್ಮೀರದಲ್ಲಿ ಶಾಂತಿ ನೆಲಸಿದೆ ಎಂಬುದರ ಅರ್ಥವಲ್ಲ’ ಎಂದು ರಕ್ಷಣಾ ತಜ್ಞರು ಎಚ್ಚರಿಸುತ್ತಾರೆ.</p>.<p>‘ಅತ್ಯಂತ ಕಡಿಣವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು, ಸ್ಥಳೀಯರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ’ ಎಂದೂ ಹೇಳಿದ್ದಾರೆ.</p>.<h2><strong>ನೇಮಕಕ್ಕೆ ಕಾರಣವಾದ ಸಂಗತಿಗಳು</strong></h2><ul><li><p>2016ರ ಜುಲೈನಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆ ನಡೆಯಿತು. ಈತ ಆಗ ಕಾಶ್ಮೀರದಲ್ಲಿ ಉಗ್ರವಾದದ ಪ್ರತಿಪಾದನೆಯಲ್ಲಿ ಮುಂಚೂಣಿಯಲ್ಲಿದ್ದ. ಈತನ ಹತ್ಯೆಯು ಯುವಕರನ್ನು ಭಯೋತ್ಪಾದಕ ಸಂಘಟನೆಗಳನ್ನು ಸೇರುವುದಕ್ಕೆ ಪ್ರಚೋದಿಸಿತು</p></li><li><p>ಹತ್ಯೆಯಾದ ಉಗ್ರರ ಸಾಮೂಹಿಕ ಅಂತ್ಯಕ್ರಿಯೆ ಕುರಿತ ವಿಡಿಯೊಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಕಾಶ್ಮೀರದಲ್ಲಿನ ಇಂತಹ ಬೆಳವಣಿಗೆಗಳಿಂದ<br>ನಿರಾಶೆಗೊಂಡಿದ್ದ ಯುವಕರು ಉಗ್ರ ಸಂಘಟನೆಗಳನ್ನು ಸೇರಿಕೊಳ್ಳಲು ಮುಂದಾದರು</p></li><li><p>ಉಗ್ರರ ಅಂತ್ಯಕ್ರಿಯೆಗಳು ನಡೆದ ಸ್ಥಳಗಳೇ ಯುವಕರ ನೇಮಕಾತಿಯ ತಾಣಗಳಾಗಿ ಪರಿವರ್ತನೆಗೊಂಡವು. ಗುಂಡು ಹಾರಿಸುವುದು ಹಾಗೂ ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರು ಆ ಸ್ಥಳದಲ್ಲಿಯೇ ಉಗ್ರ ಸಂಘಟನೆ ಸೇರುವಂತೆ ಮಾಡಲಾಗುತ್ತಿತ್ತು</p></li></ul>.<h2>ನೇಮಕ ಪ್ರಕ್ರಿಯೆಗೆ ಕಡಿವಾಣ ಬಿದ್ದದ್ದು ಹೇಗೆ?</h2><h2></h2><ul><li><p>ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ<br>ವನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಇದು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿತು.</p></li><li><p>2019ರಿಂದ 2024ರ ನಡುವೆ ಅಂದಾಜು 1050 ಉಗ್ರರ ಹತ್ಯೆ ಮಾಡಲಾಯಿತು</p></li><li><p>ಗುಪ್ತಚರ ಸಂಸ್ಥೆಗಳು ಒದಗಿಸುವ ಮಾಹಿತಿ ಆಧರಿಸಿ ಉಗ್ರ ನಿಗ್ರಹ ಕಾರ್ಯಾಚರಣೆ<br>ತೀವ್ರಗೊಳಿಸಲಾಯಿತು.</p></li><li><p>ಉಗ್ರ ಸಂಘಟನೆಗಳಿಗೆ ಹೊಸದಾಗಿ ಸೇರ್ಪಡೆಗೊಂಡವರನ್ನು ಪತ್ತೆ ಹಚ್ಚಿ ಕೆಲವೇ ದಿನಗಳು ಅಥವಾ ವಾರಗಳ ಒಳಗಾಗಿ ಅವರನ್ನು ಹತ್ಯೆ ಮಾಡಲಾಯಿತು.</p></li><li><p>ಉಗ್ರ ಸಂಘಟನೆಗಳನ್ನು ಸೇರುವ ಸಾಧ್ಯತೆ ಇದ್ದ/ಒಲವು ಹೊಂದಿದ್ದ ಯುವಕರ ಮೇಲೆ ಹಾಗೂ ನೇಮಕಾತಿ ಮಾಡಿಕೊಳ್ಳುವವರ ಮೇಲೆ ನಿರಂತರ ಕಣ್ಗಾವಲು ಇಡಲಾಯಿತು.</p></li><li><p>ತಮ್ಮ ಮಕ್ಕಳು ಉಗ್ರ ಸಂಘಟನೆ ಸೇರದಂತೆ ಮನವೊಲಿಸುವಂತೆ ಅವರ ಕುಟುಂಬಸ್ಥರಿಗೆ ವಿವರಿಸಲಾಯಿತು.</p></li><li><p>2020ರಲ್ಲಿ ಕೋವಿಡ್–19 ಪಿಡುಗು ಕಾಣಿಸಿಕೊಂಡಿದ್ದು ಯುವಕರ ನೇಮಕಾತಿಗೆ ಕಡಿವಾಣ ಬೀಳುವುದಕ್ಕೆ ತಿರುವು ನೀಡಿತು. ಹತ್ಯೆ ಮಾಡಲಾಡ ಉಗ್ರರ ಶವಗಳನ್ನು ಅವರ ಊರಿನಿಂದ ಬಹುದೂರದಲ್ಲಿ ಅಧಿಕಾರಿಗಳೇ ಹೂಳುತ್ತಿದ್ದರು. ಇದರಿಂದ ಉಗ್ರರ ಅಂತ್ಯಕ್ರಿಯೆ ವೇಳೆ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಸೇರದಂತಾಯಿತು ಹಾಗೂ ಆ ಮೂಲಕ ಯುವಕರ ನೇಮಕಕ್ಕೆ ಕಡಿವಾಣ ಬಿತ್ತು </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸ್ಥಳೀಯ ಯುವಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಬಹುತೇಕ ನಿರ್ನಾಮವಾಗಿದೆ. ಕಳೆದ ಮೂರು ದಶಕಗಳಿಂದ ಸಂಘರ್ಷ ಪೀಡಿತವಾಗಿರುವ ಈ ಪ್ರದೇಶದಲ್ಲಿ ಇಂತಹ ಪರಿವರ್ತನೆ ಕಂಡುಬಂದಿರುವುದು ಗಮನಾರ್ಹ.</p>.<p>2017ರಲ್ಲಿ 126 ಕಾಶ್ಮೀರಿ ಯುವಕರನ್ನು ಉಗ್ರ ಸಂಘಟನೆಯ ವಿವಿಧ ಶ್ರೇಣಿಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ನಂತರದ ವರ್ಷ, ಈ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂತು. 2018ರಲ್ಲಿ 200 ಯುವಕರು ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ್ದರು. ಈ ವರ್ಷ ಕೇವಲ ಒಬ್ಬ ಯುವಕ ಉಗ್ರ ಸಂಘಟನೆಗೆ ಸೇರಿದ್ದಾಗಿ ಅಂಕಿ–ಅಂಶಗಳು ಹೇಳುತ್ತವೆ.</p>.<p>ಗಡಿಗೆ ಬೇಲಿ ಹಾಕುವ ಮೂಲಕ ಗಡಿಯಾಚೆಯಿಂದ ನುಸುಳುವಿಕೆಗೆ ಕಡಿವಾಣ ಹಾಕಲಾಗಿದೆ. ಡ್ರೋನ್ಗಳ ನಿಯೋಜನೆಯಿಂದ ಕಣ್ಗಾವಲು ಹೆಚ್ಚಿಸಲಾಗಿದೆ. ಇದರಿಂದ, ದೇಶದೊಳಗೆ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುವುದನ್ನು ಕೂಡ ತಡೆಗಟ್ಟಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.</p>.<p>‘ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಬಹುತೇಕ ಸ್ಥಗಿತಗೊಂಡಿರುವುದು ತಂತ್ರಗಾರಿಕೆ ದೃಷ್ಟಿಯಿಂದ ಭದ್ರತಾ ಪಡೆಗಳಿಗೆ ಸಂದ ಗೆಲುವು. ಇದು, ಜಮ್ಮು–ಕಾಶ್ಮೀರದಲ್ಲಿ ಶಾಂತಿ ನೆಲಸಿದೆ ಎಂಬುದರ ಅರ್ಥವಲ್ಲ’ ಎಂದು ರಕ್ಷಣಾ ತಜ್ಞರು ಎಚ್ಚರಿಸುತ್ತಾರೆ.</p>.<p>‘ಅತ್ಯಂತ ಕಡಿಣವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು, ಸ್ಥಳೀಯರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ’ ಎಂದೂ ಹೇಳಿದ್ದಾರೆ.</p>.<h2><strong>ನೇಮಕಕ್ಕೆ ಕಾರಣವಾದ ಸಂಗತಿಗಳು</strong></h2><ul><li><p>2016ರ ಜುಲೈನಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆ ನಡೆಯಿತು. ಈತ ಆಗ ಕಾಶ್ಮೀರದಲ್ಲಿ ಉಗ್ರವಾದದ ಪ್ರತಿಪಾದನೆಯಲ್ಲಿ ಮುಂಚೂಣಿಯಲ್ಲಿದ್ದ. ಈತನ ಹತ್ಯೆಯು ಯುವಕರನ್ನು ಭಯೋತ್ಪಾದಕ ಸಂಘಟನೆಗಳನ್ನು ಸೇರುವುದಕ್ಕೆ ಪ್ರಚೋದಿಸಿತು</p></li><li><p>ಹತ್ಯೆಯಾದ ಉಗ್ರರ ಸಾಮೂಹಿಕ ಅಂತ್ಯಕ್ರಿಯೆ ಕುರಿತ ವಿಡಿಯೊಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಕಾಶ್ಮೀರದಲ್ಲಿನ ಇಂತಹ ಬೆಳವಣಿಗೆಗಳಿಂದ<br>ನಿರಾಶೆಗೊಂಡಿದ್ದ ಯುವಕರು ಉಗ್ರ ಸಂಘಟನೆಗಳನ್ನು ಸೇರಿಕೊಳ್ಳಲು ಮುಂದಾದರು</p></li><li><p>ಉಗ್ರರ ಅಂತ್ಯಕ್ರಿಯೆಗಳು ನಡೆದ ಸ್ಥಳಗಳೇ ಯುವಕರ ನೇಮಕಾತಿಯ ತಾಣಗಳಾಗಿ ಪರಿವರ್ತನೆಗೊಂಡವು. ಗುಂಡು ಹಾರಿಸುವುದು ಹಾಗೂ ಪ್ರಚೋದನಕಾರಿ ಭಾಷಣಗಳ ಮೂಲಕ ಯುವಕರು ಆ ಸ್ಥಳದಲ್ಲಿಯೇ ಉಗ್ರ ಸಂಘಟನೆ ಸೇರುವಂತೆ ಮಾಡಲಾಗುತ್ತಿತ್ತು</p></li></ul>.<h2>ನೇಮಕ ಪ್ರಕ್ರಿಯೆಗೆ ಕಡಿವಾಣ ಬಿದ್ದದ್ದು ಹೇಗೆ?</h2><h2></h2><ul><li><p>ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ<br>ವನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಇದು ಈ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿತು.</p></li><li><p>2019ರಿಂದ 2024ರ ನಡುವೆ ಅಂದಾಜು 1050 ಉಗ್ರರ ಹತ್ಯೆ ಮಾಡಲಾಯಿತು</p></li><li><p>ಗುಪ್ತಚರ ಸಂಸ್ಥೆಗಳು ಒದಗಿಸುವ ಮಾಹಿತಿ ಆಧರಿಸಿ ಉಗ್ರ ನಿಗ್ರಹ ಕಾರ್ಯಾಚರಣೆ<br>ತೀವ್ರಗೊಳಿಸಲಾಯಿತು.</p></li><li><p>ಉಗ್ರ ಸಂಘಟನೆಗಳಿಗೆ ಹೊಸದಾಗಿ ಸೇರ್ಪಡೆಗೊಂಡವರನ್ನು ಪತ್ತೆ ಹಚ್ಚಿ ಕೆಲವೇ ದಿನಗಳು ಅಥವಾ ವಾರಗಳ ಒಳಗಾಗಿ ಅವರನ್ನು ಹತ್ಯೆ ಮಾಡಲಾಯಿತು.</p></li><li><p>ಉಗ್ರ ಸಂಘಟನೆಗಳನ್ನು ಸೇರುವ ಸಾಧ್ಯತೆ ಇದ್ದ/ಒಲವು ಹೊಂದಿದ್ದ ಯುವಕರ ಮೇಲೆ ಹಾಗೂ ನೇಮಕಾತಿ ಮಾಡಿಕೊಳ್ಳುವವರ ಮೇಲೆ ನಿರಂತರ ಕಣ್ಗಾವಲು ಇಡಲಾಯಿತು.</p></li><li><p>ತಮ್ಮ ಮಕ್ಕಳು ಉಗ್ರ ಸಂಘಟನೆ ಸೇರದಂತೆ ಮನವೊಲಿಸುವಂತೆ ಅವರ ಕುಟುಂಬಸ್ಥರಿಗೆ ವಿವರಿಸಲಾಯಿತು.</p></li><li><p>2020ರಲ್ಲಿ ಕೋವಿಡ್–19 ಪಿಡುಗು ಕಾಣಿಸಿಕೊಂಡಿದ್ದು ಯುವಕರ ನೇಮಕಾತಿಗೆ ಕಡಿವಾಣ ಬೀಳುವುದಕ್ಕೆ ತಿರುವು ನೀಡಿತು. ಹತ್ಯೆ ಮಾಡಲಾಡ ಉಗ್ರರ ಶವಗಳನ್ನು ಅವರ ಊರಿನಿಂದ ಬಹುದೂರದಲ್ಲಿ ಅಧಿಕಾರಿಗಳೇ ಹೂಳುತ್ತಿದ್ದರು. ಇದರಿಂದ ಉಗ್ರರ ಅಂತ್ಯಕ್ರಿಯೆ ವೇಳೆ ಭಾರಿ ಸಂಖ್ಯೆಯಲ್ಲಿ ಸ್ಥಳೀಯರು ಸೇರದಂತಾಯಿತು ಹಾಗೂ ಆ ಮೂಲಕ ಯುವಕರ ನೇಮಕಕ್ಕೆ ಕಡಿವಾಣ ಬಿತ್ತು </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>