<p><strong>ತಿರುವನಂತಪುರ:</strong> ಕೇರಳ ವಿಶ್ವವಿದ್ಯಾಲಯವೊಂದರ ಬೋಧಕರ ಬಳಿಯಿದ್ದ 71 ಎಂಬಿಎ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿವೆ. ಇದು ರಾಜಕೀಯ ತಿರುವು ಪಡೆದಿದ್ದು, ಮರು ಪರೀಕ್ಷೆ ನಡೆಸುವ ತೀರ್ಮಾನಕ್ಕೆ ವಿರೋಧ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫೆಡರೇಷನ್ (ಯುಡಿಎಫ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.</p>.<p>ಈ ಪ್ರಕರಣ ರಾಜ್ಯ ಸರ್ಕಾರದ ದುರಾಡಳಿತ ಮತ್ತು ಉನ್ನತ ಶಿಕ್ಷಣದಲ್ಲಿ ಮಿತಿಮೀರಿದ ರಾಜಕೀಯಕ್ಕೆ ಉದಾಹರಣೆ ಎಂದು ಯುಡಿಎಫ್ ನಾಯಕ ಸತೀಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>2022–24ನೇ ಬ್ಯಾಚ್ನ ‘ಪ್ರಾಜೆಕ್ಟ್ ಫೈನಾನ್ಸ್’ ವಿಷಯದ ಮೂರನೇ ಸೆಮಿಸ್ಟರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕಾಗಿ ಪಾಲಕ್ಕಾಡ್ ಮೂಲದ ಬೋಧಕ ಪ್ರಮೋದ್ ಎಂಬುವವರಿಗೆ ನೀಡಲಾಗಿತ್ತು. ಬೈಕ್ನಲ್ಲಿ ತೆರಳುತ್ತಿದ್ದಾಗ ಉತ್ತರ ಪತ್ರಿಕೆಗಳು ಕಳೆದುಹೋಗಿವೆ ಎಂದು ವಿಶ್ವವಿದ್ಯಾಲಯಕ್ಕೆ ಅವರು ಮಾಹಿತಿ ನೀಡಿದ್ದರು. </p>.<p>ಕೋರ್ಸ್ ಮುಗಿದರೂ ಫಲಿತಾಂಶ ಘೋಷಿಸದೇ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ. ಪರೀಕ್ಷೆ ನಡೆದ 10 ತಿಂಗಳ ನಂತರ ಮರು ಪರೀಕ್ಷೆ ತಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ವಿವಿ ಸೂಚಿಸುತ್ತಿದೆ. ವಿವಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸಬೇಕೆ ಎಂದು ಸತೀಶನ್ ಪ್ರಶ್ನಿಸಿದ್ದಾರೆ.</p>.<p>ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಪ್ರತಿಕ್ರಿಯಿಸಿ, ‘ಇದು ಬೋಧಕರೊಬ್ಬರ ನಿರ್ಲಕ್ಷ್ಯ. ಉದ್ದೇಶಪೂರ್ವಕವಾಗಿಯೇ ಉತ್ತರ ಪತ್ರಿಕೆ ನಾಪತ್ತೆ ಮಾಡಿರಬಹುದು. ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲಿದೆ’ ಎಂದರು.</p>.<p>ಮನೆಯಲ್ಲಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಅವಕಾಶ ನೀಡಿದ್ದೇ ವಿವಿಯ ಲೋಪ. ಕಾನೂನು ರೀತಿ ಇದನ್ನು ಎದುರಿಸಲು ಸಿದ್ಧ ಪ್ರಮೋದ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳ ವಿಶ್ವವಿದ್ಯಾಲಯವೊಂದರ ಬೋಧಕರ ಬಳಿಯಿದ್ದ 71 ಎಂಬಿಎ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ನಾಪತ್ತೆಯಾಗಿವೆ. ಇದು ರಾಜಕೀಯ ತಿರುವು ಪಡೆದಿದ್ದು, ಮರು ಪರೀಕ್ಷೆ ನಡೆಸುವ ತೀರ್ಮಾನಕ್ಕೆ ವಿರೋಧ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫೆಡರೇಷನ್ (ಯುಡಿಎಫ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.</p>.<p>ಈ ಪ್ರಕರಣ ರಾಜ್ಯ ಸರ್ಕಾರದ ದುರಾಡಳಿತ ಮತ್ತು ಉನ್ನತ ಶಿಕ್ಷಣದಲ್ಲಿ ಮಿತಿಮೀರಿದ ರಾಜಕೀಯಕ್ಕೆ ಉದಾಹರಣೆ ಎಂದು ಯುಡಿಎಫ್ ನಾಯಕ ಸತೀಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>2022–24ನೇ ಬ್ಯಾಚ್ನ ‘ಪ್ರಾಜೆಕ್ಟ್ ಫೈನಾನ್ಸ್’ ವಿಷಯದ ಮೂರನೇ ಸೆಮಿಸ್ಟರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕಾಗಿ ಪಾಲಕ್ಕಾಡ್ ಮೂಲದ ಬೋಧಕ ಪ್ರಮೋದ್ ಎಂಬುವವರಿಗೆ ನೀಡಲಾಗಿತ್ತು. ಬೈಕ್ನಲ್ಲಿ ತೆರಳುತ್ತಿದ್ದಾಗ ಉತ್ತರ ಪತ್ರಿಕೆಗಳು ಕಳೆದುಹೋಗಿವೆ ಎಂದು ವಿಶ್ವವಿದ್ಯಾಲಯಕ್ಕೆ ಅವರು ಮಾಹಿತಿ ನೀಡಿದ್ದರು. </p>.<p>ಕೋರ್ಸ್ ಮುಗಿದರೂ ಫಲಿತಾಂಶ ಘೋಷಿಸದೇ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ. ಪರೀಕ್ಷೆ ನಡೆದ 10 ತಿಂಗಳ ನಂತರ ಮರು ಪರೀಕ್ಷೆ ತಗೆದುಕೊಳ್ಳಲು ವಿದ್ಯಾರ್ಥಿಗಳಿಗೆ ವಿವಿ ಸೂಚಿಸುತ್ತಿದೆ. ವಿವಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸಬೇಕೆ ಎಂದು ಸತೀಶನ್ ಪ್ರಶ್ನಿಸಿದ್ದಾರೆ.</p>.<p>ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಪ್ರತಿಕ್ರಿಯಿಸಿ, ‘ಇದು ಬೋಧಕರೊಬ್ಬರ ನಿರ್ಲಕ್ಷ್ಯ. ಉದ್ದೇಶಪೂರ್ವಕವಾಗಿಯೇ ಉತ್ತರ ಪತ್ರಿಕೆ ನಾಪತ್ತೆ ಮಾಡಿರಬಹುದು. ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಲಿದೆ’ ಎಂದರು.</p>.<p>ಮನೆಯಲ್ಲಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಅವಕಾಶ ನೀಡಿದ್ದೇ ವಿವಿಯ ಲೋಪ. ಕಾನೂನು ರೀತಿ ಇದನ್ನು ಎದುರಿಸಲು ಸಿದ್ಧ ಪ್ರಮೋದ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>