ಒಂದು ಲಕ್ಷ ಟಿವಿ, ಸ್ಮಾರ್ಟ್ಫೋನ್ ದೇಣಿಗೆ:ವಿದ್ಯಾರ್ಥಿನಿ ಆತ್ಮಹತ್ಯೆ ಬೆನ್ನಲ್ಲೇ ಸೌಲಭ್ಯವಂಚಿತ ವಿದ್ಯಾರ್ಥಿಗಳಿಗೆ ಆನ್ಲೈನ್ ಸಂಪರ್ಕ ಹಾಗೂಅವುಗಳಿಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸುವ ಹಲವು ಅಭಿಯಾನಗಳು ನಡೆದವು. ‘ಖಾಸಗಿ ಸಂಸ್ಥೆಗಳು, ಎನ್ಜಿಒಗಳು, ಜನರು ಒಂದು ಲಕ್ಷಕ್ಕೂ ಅಧಿಕ ಟಿವಿ, ಸ್ಮಾರ್ಟ್ಫೋನ್ಗಳನ್ನುದೇಣಿಗೆಯಾಗಿ ನೀಡಿದ್ದಾರೆ. ಇವುಗಳನ್ನು ಎಡಮಲಕ್ಕುಡಿಯಂಥ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್ಲೈನ್ ತರಗತಿ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಕೇರಳ ಶಿಕ್ಷಣ ಮೂಲಸೌಕರ್ಯ ಮತ್ತು ತಂತ್ರಜ್ಞಾನ(ಕೈಟ್) ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಅನ್ವರ್ ಸದಾತ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.