<p><strong>ನವದೆಹಲಿ</strong>: ಬಾಂಗ್ಲಾದೇಶ ಮತ್ತು ದೆಹಲಿಯಲ್ಲಿ ಮೂತ್ರಪಿಂಡ ಕಸಿ ಜಾಲ ನಡೆಸುತ್ತಿದ್ದ ಆರೋಪದಡಿ ದೆಹಲಿ ಮೂಲದ ವೈದ್ಯೆ ಹಾಗೂ ಬಾಂಗ್ಲಾದೇಶ ಪ್ರಜೆಗಳು ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.</p>.<p>ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ತಜ್ಞೆಯಾಗಿರುವ ಡಾ.ಡಿ.ವಿಜಯಾ ರಾಜಕುಮಾರಿ, ವೈದ್ಯೆಯ ಸಹಾಯಕ ವಿಕ್ರಮ್ ಸಿಂಗ್, ಬಾಂಗ್ಲಾದೇಶ ಪ್ರಜೆಗಳಾದ ರಸೆಲ್, ಮೊಹಮ್ಮದ್ ಸುಮೊನ್ ಮಿಯಾ ಮತ್ತು ಮೊಹಮ್ಮದ್ ರಕೋನ್ ಅಲಿಯಾಸ್ ರಾಹುಲ್ ಸರ್ಕಾರ್ ಬಂಧಿತ ಇತರರು.</p>.<p>ರಾ.ರಾಜಕುಮಾರಿ ಅವರು ನೊಯ್ಟಾದ ಯತಾರ್ಥ ಆಸ್ಪತ್ರೆಯಲ್ಲಿ ಮೂತ್ರಿಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದರು ಎಂದು ಆರೋಪಿಸಲಾಗಿದೆ.</p>.<p>‘ರಸೆಲ್ ಈ ಜಾಲದ ಸಂಚುಕೋರ. ಈತ 2019ರಲ್ಲಿ ಭಾರತಕ್ಕೆ ಬಂದಿದ್ದನಲ್ಲದೇ, ಬಾಂಗ್ಲಾದೇಶದ ರೋಗಿಯೊಬ್ಬರಿಗೆ ತನ್ನ ಮೂತ್ರಪಿಂಡ ದಾನ ಮಾಡಿದ್ದ’ ಎಂದು ಡಿಸಿಪಿ (ಕ್ರೈಂ) ಅಮಿತ್ ಗೋಯೆಲ್ ತಿಳಿಸಿದ್ದಾರೆ.</p>.<p>ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರ ಪೈಕಿ ಬಹುತೇಕರು ಬಾಂಗ್ಲಾದೇಶದವರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ಭಾರತಕ್ಕೆ ಕರೆತಂದು ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.</p>.<p>‘ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಬ್ಬ ರೋಗಿ ₹25–30 ಲಕ್ಷ ವ್ಯಯಿಸಬೇಕಾಗುತ್ತದೆ. ಇದರಲ್ಲಿ, ರಸೆಲ್ ಶೇ 2025ರಷ್ಟನ್ನು ಕಮಿಷನ್ ಆಗಿ ಪಡೆಯುತ್ತಿದ್ದ’ ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಾಂಗ್ಲಾದೇಶ ಮತ್ತು ದೆಹಲಿಯಲ್ಲಿ ಮೂತ್ರಪಿಂಡ ಕಸಿ ಜಾಲ ನಡೆಸುತ್ತಿದ್ದ ಆರೋಪದಡಿ ದೆಹಲಿ ಮೂಲದ ವೈದ್ಯೆ ಹಾಗೂ ಬಾಂಗ್ಲಾದೇಶ ಪ್ರಜೆಗಳು ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.</p>.<p>ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ತಜ್ಞೆಯಾಗಿರುವ ಡಾ.ಡಿ.ವಿಜಯಾ ರಾಜಕುಮಾರಿ, ವೈದ್ಯೆಯ ಸಹಾಯಕ ವಿಕ್ರಮ್ ಸಿಂಗ್, ಬಾಂಗ್ಲಾದೇಶ ಪ್ರಜೆಗಳಾದ ರಸೆಲ್, ಮೊಹಮ್ಮದ್ ಸುಮೊನ್ ಮಿಯಾ ಮತ್ತು ಮೊಹಮ್ಮದ್ ರಕೋನ್ ಅಲಿಯಾಸ್ ರಾಹುಲ್ ಸರ್ಕಾರ್ ಬಂಧಿತ ಇತರರು.</p>.<p>ರಾ.ರಾಜಕುಮಾರಿ ಅವರು ನೊಯ್ಟಾದ ಯತಾರ್ಥ ಆಸ್ಪತ್ರೆಯಲ್ಲಿ ಮೂತ್ರಿಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದರು ಎಂದು ಆರೋಪಿಸಲಾಗಿದೆ.</p>.<p>‘ರಸೆಲ್ ಈ ಜಾಲದ ಸಂಚುಕೋರ. ಈತ 2019ರಲ್ಲಿ ಭಾರತಕ್ಕೆ ಬಂದಿದ್ದನಲ್ಲದೇ, ಬಾಂಗ್ಲಾದೇಶದ ರೋಗಿಯೊಬ್ಬರಿಗೆ ತನ್ನ ಮೂತ್ರಪಿಂಡ ದಾನ ಮಾಡಿದ್ದ’ ಎಂದು ಡಿಸಿಪಿ (ಕ್ರೈಂ) ಅಮಿತ್ ಗೋಯೆಲ್ ತಿಳಿಸಿದ್ದಾರೆ.</p>.<p>ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರ ಪೈಕಿ ಬಹುತೇಕರು ಬಾಂಗ್ಲಾದೇಶದವರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ಭಾರತಕ್ಕೆ ಕರೆತಂದು ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.</p>.<p>‘ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಬ್ಬ ರೋಗಿ ₹25–30 ಲಕ್ಷ ವ್ಯಯಿಸಬೇಕಾಗುತ್ತದೆ. ಇದರಲ್ಲಿ, ರಸೆಲ್ ಶೇ 2025ರಷ್ಟನ್ನು ಕಮಿಷನ್ ಆಗಿ ಪಡೆಯುತ್ತಿದ್ದ’ ಎಂದೂ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>