<p><strong>ಡೆಹ್ರಾಡೂನ್:</strong> ‘ನೇಪಾಳದಲ್ಲಿ ನಡೆದಂಥ ಘಟನೆಗಳು ಭಾರತದಲ್ಲಿ ಸಂಭವಿಸುವುದಿಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು. </p>.<p>‘ಭಾರತವನ್ನು ಅರ್ಥಮಾಡಿಕೊಳ್ಳದ ಜನರು ಮಾತ್ರ ದೇಶದಲ್ಲಿ ಮಿಲಿಟರಿ ಆಡಳಿತ ಅಥವಾ ನಾಗರಿಕ ದಂಗೆ ಸಂಭವಿಸಬಹುದು ಎನ್ನುತ್ತಾರೆ. ಆದರೆ ಇಂತಹ ಘಟನೆಗಳು ಎಂದಿಗೂ ಸಂಭವಿಸುವುದಿಲ್ಲ ಎಂಬ ಖಾತ್ರಿ ನನಗಿದೆ’ ಎಂದು ಈ ಹಿಂದಿನ ಸೋವಿಯತ್ ಒಕ್ಕೂಟ ಹಾಗೂ ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದರು.</p>.<p>ಸೋಮವಾರ ಇಲ್ಲಿ ನಡೆದ ‘ಸ್ಪರ್ಶ್ ಹಿಮಾಲಯ ಮಹೋತ್ಸವ–2025’ರಲ್ಲಿ ಮಾತನಾಡಿದ ರಿಜಿಜು, ಇದಕ್ಕೆ ಎರಡು ಕಾರಣಗಳನ್ನು ಉಲ್ಲೇಖಿಸಿದರು. ‘ನಮ್ಮ ದೇಶದ ಸ್ವರೂಪ ಹಾಗೂ ಸಂವಿಧಾನವು ಜಗತ್ತಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿರುವುದರಿಂದ, ನಮ್ಮಲ್ಲಿ ಅಂತಹ ವಿದ್ಯಮಾನ ಘಟಿಸಲ್ಲ’ ಎಂದರು.</p>.<p>‘ಜಗತ್ತಿನ ಇತರ ಭಾಗಗಳಿಗಿಂತ ನಾವು ಭಿನ್ನರಾಗಿದ್ದೇವೆ. ದೇಶ ವಿಭಜನೆ ಸಾಧ್ಯವಿಲ್ಲ. ಪ್ರಪಂಚದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಭಾರತ ಮಾತ್ರ ಸದಾಕಾಲ ಸುರಕ್ಷಿತವಾಗಿರುತ್ತದೆ’ ಎಂದು ಹೇಳಿದರು.</p>.<p>‘ಸಾಮಾಜಿಕ ಮಾಧ್ಯಮದಲ್ಲಿನ ‘ನಿರೂಪಣೆ’ಯನ್ನು ನಂಬದಿರಿ. ಈ ಬಗ್ಗೆ ಜಾಗರೂಕರಾಗಿರಿ’ ಎಂದು ಸಲಹೆ ನೀಡಿದರು.</p>.<p>‘ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸಲು ಹಾಗೂ ಅಸ್ಥಿರಗೊಳಿಸಲು ದೇಶದ ಒಳಗೂ–ಹೊರಗೂ ಯತ್ನ ನಡೆದಿವೆ. ಇದರ ನಡುವೆಯೂ ರಾಷ್ಟ್ರವು ಪ್ರಗತಿ ಪಥದಲ್ಲಿ ಸಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್:</strong> ‘ನೇಪಾಳದಲ್ಲಿ ನಡೆದಂಥ ಘಟನೆಗಳು ಭಾರತದಲ್ಲಿ ಸಂಭವಿಸುವುದಿಲ್ಲ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು. </p>.<p>‘ಭಾರತವನ್ನು ಅರ್ಥಮಾಡಿಕೊಳ್ಳದ ಜನರು ಮಾತ್ರ ದೇಶದಲ್ಲಿ ಮಿಲಿಟರಿ ಆಡಳಿತ ಅಥವಾ ನಾಗರಿಕ ದಂಗೆ ಸಂಭವಿಸಬಹುದು ಎನ್ನುತ್ತಾರೆ. ಆದರೆ ಇಂತಹ ಘಟನೆಗಳು ಎಂದಿಗೂ ಸಂಭವಿಸುವುದಿಲ್ಲ ಎಂಬ ಖಾತ್ರಿ ನನಗಿದೆ’ ಎಂದು ಈ ಹಿಂದಿನ ಸೋವಿಯತ್ ಒಕ್ಕೂಟ ಹಾಗೂ ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಉದಾಹರಣೆಗಳನ್ನು ಉಲ್ಲೇಖಿಸಿ ಹೇಳಿದರು.</p>.<p>ಸೋಮವಾರ ಇಲ್ಲಿ ನಡೆದ ‘ಸ್ಪರ್ಶ್ ಹಿಮಾಲಯ ಮಹೋತ್ಸವ–2025’ರಲ್ಲಿ ಮಾತನಾಡಿದ ರಿಜಿಜು, ಇದಕ್ಕೆ ಎರಡು ಕಾರಣಗಳನ್ನು ಉಲ್ಲೇಖಿಸಿದರು. ‘ನಮ್ಮ ದೇಶದ ಸ್ವರೂಪ ಹಾಗೂ ಸಂವಿಧಾನವು ಜಗತ್ತಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿರುವುದರಿಂದ, ನಮ್ಮಲ್ಲಿ ಅಂತಹ ವಿದ್ಯಮಾನ ಘಟಿಸಲ್ಲ’ ಎಂದರು.</p>.<p>‘ಜಗತ್ತಿನ ಇತರ ಭಾಗಗಳಿಗಿಂತ ನಾವು ಭಿನ್ನರಾಗಿದ್ದೇವೆ. ದೇಶ ವಿಭಜನೆ ಸಾಧ್ಯವಿಲ್ಲ. ಪ್ರಪಂಚದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಭಾರತ ಮಾತ್ರ ಸದಾಕಾಲ ಸುರಕ್ಷಿತವಾಗಿರುತ್ತದೆ’ ಎಂದು ಹೇಳಿದರು.</p>.<p>‘ಸಾಮಾಜಿಕ ಮಾಧ್ಯಮದಲ್ಲಿನ ‘ನಿರೂಪಣೆ’ಯನ್ನು ನಂಬದಿರಿ. ಈ ಬಗ್ಗೆ ಜಾಗರೂಕರಾಗಿರಿ’ ಎಂದು ಸಲಹೆ ನೀಡಿದರು.</p>.<p>‘ಭಾರತವನ್ನು ನಕಾರಾತ್ಮಕವಾಗಿ ಬಿಂಬಿಸಲು ಹಾಗೂ ಅಸ್ಥಿರಗೊಳಿಸಲು ದೇಶದ ಒಳಗೂ–ಹೊರಗೂ ಯತ್ನ ನಡೆದಿವೆ. ಇದರ ನಡುವೆಯೂ ರಾಷ್ಟ್ರವು ಪ್ರಗತಿ ಪಥದಲ್ಲಿ ಸಾಗುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>