ಕೋಲ್ಕತ್ತ :ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸದಂತೆ, ತಲೆಮರೆಸಿಕೊಂಡಿರುವ ಮಾಜಿ ಐಪಿಎಸ್ ಅಧಿಕಾರಿ ರಾಜೀವ್ಕುಮಾರ್ ಅವರ ಪತ್ತೆಗೆ ಕಳುಹಿಸಿದ್ದ ಸಿಬಿಐ ವಿಶೇಷ ತಂಡ ದೆಹಲಿಗೆ ವಾಪಸಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಸಮನ್ಸ್ ಕಳುಹಿಸಿದರೂ, ರಾಜೀವ್ ಕುಮಾರ್ ಪ್ರತಿಕ್ರಿಯಿಸದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿತ್ತು.
ಸೆ.17 ರಂದು ಕೋಲ್ಕತ್ತಗೆ ತೆರಳಿದ್ದ ವಿಶೇಷತಂಡ ನಗರ ಮತ್ತು ಸುತ್ತಮುತ್ತಲಿನ ಹಲವು ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿತು. ಆದರೆ, ರಾಜೀವ್ಕುಮಾರ್ ಅವರನ್ನು ಪತ್ತೆ ಹಚ್ಚಲು ವಿಫಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.