ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ನವನಿರ್ಮಾಣ: ಸ್ವಚ್ಛತೆಗೆ 70 ಸಾವಿರ ಮಂದಿ

Last Updated 28 ಆಗಸ್ಟ್ 2018, 19:03 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಭತ್ತದ ಕಣಜ ಎಂದು ಖ್ಯಾತಿ ಗಳಿಸಿರುವ ಕುಟ್ಟನಾಡು ಪ್ರದೇಶದಲ್ಲಿ ಮಂಗಳವಾರ ಏಕಕಾಲಕ್ಕೆ 70 ಸಾವಿರ ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ರಾಜ್ಯ ಹಣಕಾಸು ಸಚಿವ ಥಾಮಸ್‌ ಐಸಾಕ್‌, ಲೋಕೋಪಯೋಗಿ ಸಚಿವ ಜಿ.ಸುಧಾಕರನ್‌ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಕುಟ್ಟನಾಡು, ಕೈನಾಕಾರಿ, ನೆಡುಮುಡಿ ಪ್ರದೇಶಗಳ 1 ಲಕ್ಷ ಕಟ್ಟಡ ಹಾಗೂ ಕೃಷಿ ಭೂಮಿಯಲ್ಲಿ ಬಿದ್ದಿದ್ದ ಕಸ ಮತ್ತಿತರ ವಶಗಳನ್ನು ತೆರವುಗೊಳಿಸಿದರು.

1 ಸಾವಿರ ಎಂಜಿನಿಯರ್‌ಗಳು, ಐಟಿ ಉದ್ಯೋಗಿಗಳು, ಹಾವು ಹಿಡಿಯುವವರು ಕೂಡ ಈ ಕಾರ್ಯದಲ್ಲಿ ಜೊತೆಗೂಡಿದ್ದರು.

ಕುಟ್ಟನಾಡು ಪ್ರದೇಶದಲ್ಲಿ ನಡೆದ ಶುಚಿತ್ವ ಕಾರ್ಯಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್‌ 30ರ ಒಳಗೆ ರಾಜ್ಯದ ಎಲ್ಲ ಜಿಲ್ಲೆಗಳನ್ನು ಶುಚಿಗೊಳಿಸಲು ಇಂತಹ ಕಾರ್ಯಗಳನ್ನು ಮತ್ತಷ್ಟು ನಡೆಸಲು ಸರ್ಕಾರ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT