ಇನ್ನೊಂದೆಡೆ, ಟ್ರಿಟೊನ್ ಆಸ್ಪತ್ರೆಯ ಡಾ. ದೀಪಾಲಿ ಗುಪ್ತಾ ಅವರು, ‘ತೀವ್ರ ನಿಗಾ ಘಟಕಕ್ಕೆ ಆಕ್ಸಿಜನ್ ಪೂರೈಕೆಯ ವ್ಯವಸ್ಥೆ ಮಾಡಲು ಇನ್ನಿಲ್ಲದ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದ್ದಾರೆ. ‘ಒಂದು ವಾರದಿಂದ ಕಷ್ಟ ಪಡುತ್ತಿದ್ದೇವೆ. ಆಕ್ಸಿಜನ್ ಸಿಲಿಂಡರ್ಗಳ ಪೂರೈಕೆ ಖಾತರಿ ಸಿಗದಿದ್ದರೆ ದೊಡ್ಡ ದುರಂತವೇ ಸಂಭವಿಸಬಹುದು’ ಎಂದು ಅವರು ಹೇಳಿದ್ದರು.