<p><strong>ನವದೆಹಲಿ: </strong>ಎಲ್ಜೆಪಿಯ ಚಿರಾಗ್ ಪಾಸ್ವಾನ್ ಬಣ ಹಾಗೂ ಪಶುಪತಿ ಕುಮಾರ್ ಪಾರಸ್ ಬಣಗಳು ಮಂಗಳವಾರ ಪರಸ್ಪರರನ್ನು ಉಚ್ಚಾಟಿಸುವ ಮೂಲಕ ಪಕ್ಷದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿವೆ.</p>.<p>ಚಿರಾಗ್ ಪಾಸ್ವಾನ್ ಬಣವು ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿ, ಐವರು ಬಂಡಾಯ ಸಂಸದರನ್ನು ಉಚ್ಚಾಟಿಸುವ ತೀರ್ಮಾನ ಕೈಗೊಂ<br />ಡಿತು. ಇನ್ನೊಂದೆಡೆ ಪಾರಸ್ ನೇತೃತ್ವದ ಬಣವು ಪಾಸ್ವಾನ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿದೆ. ತಮ್ಮದೇ ನಿಜವಾದ ಲೋಕ ಜನಶಕ್ತಿ ಪಕ್ಷ ಎಂದು ಎರಡೂ ಬಣಗಳು ವಾದಿಸಿವೆ.</p>.<p>ಪಕ್ಷದ ಆರು ಮಂದಿ ಸಂಸದರಲ್ಲಿ ಐವರು ಪಾರಸ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಚಿರಾಗ್ ಅವರು ಮಂಗಳವಾರ ವರ್ಚುವಲ್ ಮಾಧ್ಯಮದಲ್ಲಿ ಪಕ್ಷದ ಸಭೆ ಆಯೋಜಿಸಿದ್ದು, 76ರಲ್ಲಿ 41 ಮಂದಿ ಸದಸ್ಯರು ಆ ಸಭೆಯಲ್ಲಿ ಪಾಲ್ಗೊಂಡಿ<br />ದ್ದರು. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಐವರು ಸಂಸದರನ್ನು ಉಚ್ಚಾಟಿ<br />ಸಲು ಸಭೆಯಲ್ಲಿ ಅವಿರೋಧವಾಗಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ಬಿಹಾರ ಘಟಕದ ಕಾರ್ಯನಿರ್ವಾಹಕ ಅಧ್ಯಕ್ಷ ರಾಜು ತಿವಾರಿ ತಿಳಿಸಿದ್ದಾರೆ.</p>.<p>ಇನ್ನೊಂದೆಡೆ, ಸಂಸದರೂ ಆಗಿರುವ ಚಿರಾಗ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲು ತುರ್ತಾಗಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎಂಬ ನಿಯಮಾನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಐದು ದಿನದೊಳಗೆ ಪಕ್ಷದ ರಾಷ್ಟ್ರೀಯ ಮಂಡಳಿಯ ಸಭೆ ಕರೆಯಲಾಗುವುದು ಎಂದು ಪಾರಸ್ ಬಣ ತಿಳಿಸಿದೆ.</p>.<p>ಈ ಬೆಳವಣಿಗೆಗಳ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಪಾಸ್ವಾನ್, ‘ಪಕ್ಷ ತಾಯಿ ಇದ್ದಂತೆ. ಅದಕ್ಕೆ ದ್ರೋಹ ಬಗೆಯಬಾರದು’ ಎಂದಿದ್ದಾರೆ.</p>.<p>ಕಳೆದ ಮಾರ್ಚ್ 29ರಂದು ಚಿಕ್ಕಪ್ಪ ಪಾರಸ್ ಅವರಿಗೆ ತಾವು ಬರೆದಿದ್ದ ಪತ್ರ<br />ವೊಂದನ್ನು ಚಿರಾಗ್ ಅವರು ಟ್ವಿಟರ್<br />ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪಾರಸ್ ಅವರು ಪಕ್ಷದ ನೀತಿಯನ್ನು ಉಲ್ಲಂಘಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಕುಟುಂಬ ಹಾಗೂ ಪಕ್ಷಕ್ಕೆ ನಿಷ್ಠೆಯನ್ನು ಪ್ರದರ್ಶಿಸುವಂತೆ ಸೂಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಎಲ್ಜೆಪಿಯ ಚಿರಾಗ್ ಪಾಸ್ವಾನ್ ಬಣ ಹಾಗೂ ಪಶುಪತಿ ಕುಮಾರ್ ಪಾರಸ್ ಬಣಗಳು ಮಂಗಳವಾರ ಪರಸ್ಪರರನ್ನು ಉಚ್ಚಾಟಿಸುವ ಮೂಲಕ ಪಕ್ಷದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿವೆ.</p>.<p>ಚಿರಾಗ್ ಪಾಸ್ವಾನ್ ಬಣವು ರಾಷ್ಟ್ರೀಯ ಕಾರ್ಯಕಾರಿಣಿಯನ್ನು ನಡೆಸಿ, ಐವರು ಬಂಡಾಯ ಸಂಸದರನ್ನು ಉಚ್ಚಾಟಿಸುವ ತೀರ್ಮಾನ ಕೈಗೊಂ<br />ಡಿತು. ಇನ್ನೊಂದೆಡೆ ಪಾರಸ್ ನೇತೃತ್ವದ ಬಣವು ಪಾಸ್ವಾನ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿದೆ. ತಮ್ಮದೇ ನಿಜವಾದ ಲೋಕ ಜನಶಕ್ತಿ ಪಕ್ಷ ಎಂದು ಎರಡೂ ಬಣಗಳು ವಾದಿಸಿವೆ.</p>.<p>ಪಕ್ಷದ ಆರು ಮಂದಿ ಸಂಸದರಲ್ಲಿ ಐವರು ಪಾರಸ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಚಿರಾಗ್ ಅವರು ಮಂಗಳವಾರ ವರ್ಚುವಲ್ ಮಾಧ್ಯಮದಲ್ಲಿ ಪಕ್ಷದ ಸಭೆ ಆಯೋಜಿಸಿದ್ದು, 76ರಲ್ಲಿ 41 ಮಂದಿ ಸದಸ್ಯರು ಆ ಸಭೆಯಲ್ಲಿ ಪಾಲ್ಗೊಂಡಿ<br />ದ್ದರು. ಪಕ್ಷವಿರೋಧಿ ಚಟುವಟಿಕೆ ನಡೆಸಿದ ಐವರು ಸಂಸದರನ್ನು ಉಚ್ಚಾಟಿ<br />ಸಲು ಸಭೆಯಲ್ಲಿ ಅವಿರೋಧವಾಗಿ ತೀರ್ಮಾನಿಸಲಾಗಿದೆ ಎಂದು ಪಕ್ಷದ ಬಿಹಾರ ಘಟಕದ ಕಾರ್ಯನಿರ್ವಾಹಕ ಅಧ್ಯಕ್ಷ ರಾಜು ತಿವಾರಿ ತಿಳಿಸಿದ್ದಾರೆ.</p>.<p>ಇನ್ನೊಂದೆಡೆ, ಸಂಸದರೂ ಆಗಿರುವ ಚಿರಾಗ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲು ತುರ್ತಾಗಿ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ‘ಒಬ್ಬ ವ್ಯಕ್ತಿಗೆ ಒಂದು ಹುದ್ದೆ’ ಎಂಬ ನಿಯಮಾನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಐದು ದಿನದೊಳಗೆ ಪಕ್ಷದ ರಾಷ್ಟ್ರೀಯ ಮಂಡಳಿಯ ಸಭೆ ಕರೆಯಲಾಗುವುದು ಎಂದು ಪಾರಸ್ ಬಣ ತಿಳಿಸಿದೆ.</p>.<p>ಈ ಬೆಳವಣಿಗೆಗಳ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಪಾಸ್ವಾನ್, ‘ಪಕ್ಷ ತಾಯಿ ಇದ್ದಂತೆ. ಅದಕ್ಕೆ ದ್ರೋಹ ಬಗೆಯಬಾರದು’ ಎಂದಿದ್ದಾರೆ.</p>.<p>ಕಳೆದ ಮಾರ್ಚ್ 29ರಂದು ಚಿಕ್ಕಪ್ಪ ಪಾರಸ್ ಅವರಿಗೆ ತಾವು ಬರೆದಿದ್ದ ಪತ್ರ<br />ವೊಂದನ್ನು ಚಿರಾಗ್ ಅವರು ಟ್ವಿಟರ್<br />ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪಾರಸ್ ಅವರು ಪಕ್ಷದ ನೀತಿಯನ್ನು ಉಲ್ಲಂಘಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಕುಟುಂಬ ಹಾಗೂ ಪಕ್ಷಕ್ಕೆ ನಿಷ್ಠೆಯನ್ನು ಪ್ರದರ್ಶಿಸುವಂತೆ ಸೂಚಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>