ನವದೆಹಲಿ: ಸರ್ಕಾರಿ ಬಂಗಲೆಗಳಲ್ಲಿ ಅವಧಿ ಮೀರಿ ವಾಸಿಸುತ್ತಿರುವ ಮಾಜಿ ಸಂಸದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು ಅವರ ನಿವಾಸಗಳಿಗೆ ವಿದ್ಯುತ್, ನೀರು ಮತ್ತು ಅಡುಗೆ ಅನಿಲ ಸಂಪರ್ಕವನ್ನು ಕಡಿತಗೊಳಿಸುವಂತೆ ಲೋಕಸಭಾ ಸದನ ಸಮಿತಿ ಮಂಗಳವಾರ ನಿರ್ದೇಶನ ನೀಡಿದೆ. ಅಲ್ಲದೆ ಮನೆ ತೆರವು ಮಾಡಲು ಪೊಲೀಸರ ನೆರವು ಕೋರಿದೆ.