<p><strong>ಉಮರಿಯಾ, ಮಧ್ಯಪ್ರದೇಶ</strong>: ಉಮರಿಯಾ ಜಿಲ್ಲೆಯ ಗಿಂಜ್ರಿ ಗ್ರಾಮದಲ್ಲಿ ಹಸುವೊಂದಕ್ಕೆ ಸ್ಫೋಟ ಮಿಶ್ರಿತ ಆಹಾರ ನೀಡಲಾಗಿದ್ದು, ಸ್ಫೋಟದಿಂದಾಗಿ ಅದರ ಬಾಯೊಳಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.</p>.<p>ಗ್ರಾಮದ ಓಂ ಪ್ರಕಾಶ್ ಅಗ್ರವಾಲ್ ಅವರಿಗೆ ಸೇರಿದ ಹಸು ಗಾಯಗೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<p>‘ಮನೆಯ ಸುತ್ತಮುತ್ತ ಮೇಯುತ್ತಿದ್ದ ಹಸು, ಜೂನ್ 14ರಂದು ಮನೆಗೆ ಬರಲಿಲ್ಲ. ಕೊನೆಗೆ ಮಂಗಳವಾರ ಪತ್ತೆಯಾಯಿತು. ಅದರ ದವಡೆಯಲ್ಲಿ ಗಾಯ ಕಂಡು ಬಂತು. ಸ್ಫೋಟಕ ಬೆರೆಸಿದ ಆಹಾರ ನೀಡಲಾಗಿತ್ತು, ಹೀಗಾಗಿ ಅದರ ಬಾಯಲ್ಲಿ ಗಾಯಗಳಾಗಿವೆ’ ಎಂದು ಓಂ ಪ್ರಕಾಶ್ ಹೇಳಿದ್ದಾರೆ.</p>.<p>‘ಹಸು ಈಗ ಏನನ್ನೂ ತಿನ್ನುವ ಸ್ಥಿತಿಯಲ್ಲಿ ಇಲ್ಲ. ಒಂದು ತಿಂಗಳಿನ ತನ್ನ ಕರುವಿಗೂ ಹಾಲು ಕುಡಿಸಲೂ ಅದಕ್ಕೆ ಆಗುತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.</p>.<p>‘ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಲು ವಿಫಲರಾದರೆ, ನಾವೇ ಅವರನ್ನು ಪತ್ತೆ ಹಚ್ಚುತ್ತೇವೆ’ ಎಂದು ಬಜರಂಗ ದಳದ ಮುಖಂಡ ಉಪೇಂದ್ರ ಸಿಂಗ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಮರಿಯಾ, ಮಧ್ಯಪ್ರದೇಶ</strong>: ಉಮರಿಯಾ ಜಿಲ್ಲೆಯ ಗಿಂಜ್ರಿ ಗ್ರಾಮದಲ್ಲಿ ಹಸುವೊಂದಕ್ಕೆ ಸ್ಫೋಟ ಮಿಶ್ರಿತ ಆಹಾರ ನೀಡಲಾಗಿದ್ದು, ಸ್ಫೋಟದಿಂದಾಗಿ ಅದರ ಬಾಯೊಳಗೆ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.</p>.<p>ಗ್ರಾಮದ ಓಂ ಪ್ರಕಾಶ್ ಅಗ್ರವಾಲ್ ಅವರಿಗೆ ಸೇರಿದ ಹಸು ಗಾಯಗೊಂಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<p>‘ಮನೆಯ ಸುತ್ತಮುತ್ತ ಮೇಯುತ್ತಿದ್ದ ಹಸು, ಜೂನ್ 14ರಂದು ಮನೆಗೆ ಬರಲಿಲ್ಲ. ಕೊನೆಗೆ ಮಂಗಳವಾರ ಪತ್ತೆಯಾಯಿತು. ಅದರ ದವಡೆಯಲ್ಲಿ ಗಾಯ ಕಂಡು ಬಂತು. ಸ್ಫೋಟಕ ಬೆರೆಸಿದ ಆಹಾರ ನೀಡಲಾಗಿತ್ತು, ಹೀಗಾಗಿ ಅದರ ಬಾಯಲ್ಲಿ ಗಾಯಗಳಾಗಿವೆ’ ಎಂದು ಓಂ ಪ್ರಕಾಶ್ ಹೇಳಿದ್ದಾರೆ.</p>.<p>‘ಹಸು ಈಗ ಏನನ್ನೂ ತಿನ್ನುವ ಸ್ಥಿತಿಯಲ್ಲಿ ಇಲ್ಲ. ಒಂದು ತಿಂಗಳಿನ ತನ್ನ ಕರುವಿಗೂ ಹಾಲು ಕುಡಿಸಲೂ ಅದಕ್ಕೆ ಆಗುತ್ತಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.</p>.<p>‘ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಲು ವಿಫಲರಾದರೆ, ನಾವೇ ಅವರನ್ನು ಪತ್ತೆ ಹಚ್ಚುತ್ತೇವೆ’ ಎಂದು ಬಜರಂಗ ದಳದ ಮುಖಂಡ ಉಪೇಂದ್ರ ಸಿಂಗ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>