<p><strong>ಚೆನ್ನೈ</strong>: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರಪಳಿಯಿಂದ ಕಟ್ಟಿಹಾಕಿದ್ದಂತೆ ಬಿಂಬಿಸಿದ್ದ ಕ್ಯಾರಿಕೇಚರ್ ಅನ್ನು ವೆಬ್ಸೈಟ್ನಿಂದ ತೆಗೆಯುವಂತೆ ‘ಆನಂದ ವಿಕಟನ್’ ಮಾಧ್ಯಮ ಸಂಸ್ಥೆಗೆ ಮದ್ರಾಸ್ ಹೈಕೋರ್ಟ್, ಸೂಚಿಸಿದೆ.</p>.<p>ವೆಬ್ಸೈಟ್ನಿಂದ ಕ್ಯಾರಿಕೇಚರ್ ತೆಗೆದಿರುವ ಮಾಹಿತಿಯನ್ನು ಸಂಸ್ಥೆಯು ಕೇಂದ್ರ ಸರ್ಕಾರಕ್ಕೂ ನೀಡಬೇಕು. ಈ ಮಾಹಿತಿ ತಲುಪಿದ ಬಳಿಕ ‘ಆನಂದ ವಿಕಟನ್’ ವೆಬ್ಸೈಟ್ಗೆ ಈಗ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯಕ್ಕೆ ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರು ಗುರುವಾರ ಸೂಚಿಸಿದರು. </p>.<p class="bodytext">ವೆಬ್ಸೈಟ್ಗೆ ನಿರ್ಬಂಧ ಹೇರಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಫೆ. 25, 2025ರ ಆದೇಶವನ್ನು ಆನಂದ ವಿಕಟನ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಕೋರ್ಟ್ನಲ್ಲಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಈ ಕುರಿತು ಮಧ್ಯಂತರ ಆದೇಶ ನೀಡಿತು.</p>.<p>ಹಿರಿಯ ವಕೀಲ ವಿಜಯ ನಾರಾಯಣ್ ಅವರು ‘ಆನಂದ ವಿಕಟನ್’ ಪರವಾಗಿ ವಾದ ಮಂಡಿಸಿ, ಕ್ಯಾರಿಕೇಚರ್ ಪ್ರಕಟಣೆಯಿಂದ ದೇಶದ ಸಾರ್ವಭೌಮತೆಗೆ ಧಕ್ಕೆ ಆಗದು ಎಂದರು.</p>.<p>ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಆರ್.ಎಲ್. ಸುಂದರೇಶನ್, ‘ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು, ವೆಬ್ಸೈಟ್ನಿಂದ ಉಲ್ಲೇಖಿತ ಕ್ಯಾರಿಕೇಚರ್ ತೆಗೆದರೆ ನಿರ್ಬಂಧ ಹಿಂಪಡೆಯಬಹುದು ಎಂದು ಸಲಹೆ ಮಾಡಿದೆ’ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.</p>.<p>ಉಭಯತ್ರರ ವಾದ ಆಲಿಸಿದ ನ್ಯಾಯಮೂರ್ತಿಗಳು, ಮಧ್ಯಂತರ ಆದೇಶವನ್ನು ನೀಡಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ</strong>: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರಪಳಿಯಿಂದ ಕಟ್ಟಿಹಾಕಿದ್ದಂತೆ ಬಿಂಬಿಸಿದ್ದ ಕ್ಯಾರಿಕೇಚರ್ ಅನ್ನು ವೆಬ್ಸೈಟ್ನಿಂದ ತೆಗೆಯುವಂತೆ ‘ಆನಂದ ವಿಕಟನ್’ ಮಾಧ್ಯಮ ಸಂಸ್ಥೆಗೆ ಮದ್ರಾಸ್ ಹೈಕೋರ್ಟ್, ಸೂಚಿಸಿದೆ.</p>.<p>ವೆಬ್ಸೈಟ್ನಿಂದ ಕ್ಯಾರಿಕೇಚರ್ ತೆಗೆದಿರುವ ಮಾಹಿತಿಯನ್ನು ಸಂಸ್ಥೆಯು ಕೇಂದ್ರ ಸರ್ಕಾರಕ್ಕೂ ನೀಡಬೇಕು. ಈ ಮಾಹಿತಿ ತಲುಪಿದ ಬಳಿಕ ‘ಆನಂದ ವಿಕಟನ್’ ವೆಬ್ಸೈಟ್ಗೆ ಈಗ ವಿಧಿಸಿರುವ ನಿರ್ಬಂಧವನ್ನು ಹಿಂಪಡೆಯಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವಾಲಯಕ್ಕೆ ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರು ಗುರುವಾರ ಸೂಚಿಸಿದರು. </p>.<p class="bodytext">ವೆಬ್ಸೈಟ್ಗೆ ನಿರ್ಬಂಧ ಹೇರಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಫೆ. 25, 2025ರ ಆದೇಶವನ್ನು ಆನಂದ ವಿಕಟನ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಕೋರ್ಟ್ನಲ್ಲಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಈ ಕುರಿತು ಮಧ್ಯಂತರ ಆದೇಶ ನೀಡಿತು.</p>.<p>ಹಿರಿಯ ವಕೀಲ ವಿಜಯ ನಾರಾಯಣ್ ಅವರು ‘ಆನಂದ ವಿಕಟನ್’ ಪರವಾಗಿ ವಾದ ಮಂಡಿಸಿ, ಕ್ಯಾರಿಕೇಚರ್ ಪ್ರಕಟಣೆಯಿಂದ ದೇಶದ ಸಾರ್ವಭೌಮತೆಗೆ ಧಕ್ಕೆ ಆಗದು ಎಂದರು.</p>.<p>ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಆರ್.ಎಲ್. ಸುಂದರೇಶನ್, ‘ಕೇಂದ್ರ ಸರ್ಕಾರ ರಚಿಸಿದ್ದ ಸಮಿತಿಯು, ವೆಬ್ಸೈಟ್ನಿಂದ ಉಲ್ಲೇಖಿತ ಕ್ಯಾರಿಕೇಚರ್ ತೆಗೆದರೆ ನಿರ್ಬಂಧ ಹಿಂಪಡೆಯಬಹುದು ಎಂದು ಸಲಹೆ ಮಾಡಿದೆ’ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.</p>.<p>ಉಭಯತ್ರರ ವಾದ ಆಲಿಸಿದ ನ್ಯಾಯಮೂರ್ತಿಗಳು, ಮಧ್ಯಂತರ ಆದೇಶವನ್ನು ನೀಡಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>